ಬೀದರ್: ಕಾರು- ಗೂಡ್ಸ್ ವಾಹನ ಢಿಕ್ಕಿ, ಇಬ್ಬರು ಸಾವು

ಮೃತರನ್ನು ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾಗೂರು ಗ್ರಾಮದ ನಿವಾಸಿ ಜಗನ್ನಾಥ (35) ಹಾಗೂ ಬೀದರ್ ನ ಎಂಡಿ ಇಸ್ಮಾಯಿಲ್ (45) ಎಂದು ಗುರುತಿಸಲಾಗಿದೆ.
ಕಾರು- ಗೂಡ್ಸ್ ವಾಹನದ ನಡುವೆ
ಅಪಘಾತದಲ್ಲಿ ಜಖಂಗೊಂಡಿರುವ ಕಾರು- ಗೂಡ್ಸ್ ವಾಹನ
Updated on

ಬೀದರ್: ಕಾರು ಮತ್ತು ಗೂಡ್ಸ್ ವಾಹನದ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಬಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.

ಮೃತರನ್ನು ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾಗೂರು ಗ್ರಾಮದ ನಿವಾಸಿ ಜಗನ್ನಾಥ (35) ಹಾಗೂ ಬೀದರ್ ನ ಎಂಡಿ ಇಸ್ಮಾಯಿಲ್ (45) ಎಂದು ಗುರುತಿಸಲಾಗಿದೆ.

ಹಳ್ಳಿಖೇಡ್ ನ ಬಿಎಸ್ ಎಸ್ ಕೆ ಸಕ್ಕರೆ ಕಾರ್ಖಾನೆ ಹತ್ತಿರುವ ಇರುವ ಸೇತುವೆ ಮೇಲೆ ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com