ತುಮಕೂರು: ಮಧುಗಿರಿ ಬಳಿ ಕರಡಿಗಳ ದಾಳಿಯಲ್ಲಿ ಮಹಿಳೆಗೆ ಗಂಭೀರ ಗಾಯ

ಮಧ್ಯಾಹ್ನ ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಎಲ್ಲಿಂದಲೋ ಮೂರು ಕರಡಿಗಳು ಕಾಣಿಸಿಕೊಂಡವು, ಅದರಲ್ಲಿ ಒಂದು ಕರಡಿ ಮೇಲೆ ದಾಳಿ ಮಾಡಿತು. ಅವರು ಕಿರುಚಿದಾಗ, ಅವರ ಪತಿ ನಾಗರಾಜು ಹಾಗೂ ಹತ್ತಿರದಲ್ಲಿದ್ದ ಇತರರು ಬಂದು ಕರಡಿಯನ್ನು ಓಡಿಸಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಮಧುಗಿರಿ: ಗದ್ದೆಯಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ಮಹಿಳೆಯ ಮೇಲೆ ಹಗಲು ಹೊತ್ತಿನಲ್ಲಿ ಕರಡಿಯೊಂದು ದಾಳಿ ಮಾಡಿದೆ. ಪುರವರ ಹೋಬಳಿಯ ಭಾಗ್ಯಮ್ಮ ತಲೆಗೆ ತೀವ್ರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಾಹ್ನ ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಎಲ್ಲಿಂದಲೋ ಮೂರು ಕರಡಿಗಳು ಕಾಣಿಸಿಕೊಂಡವು, ಅದರಲ್ಲಿ ಒಂದು ಕರಡಿ ಮೇಲೆ ದಾಳಿ ಮಾಡಿತು. ಅವರು ಕಿರುಚಿದಾಗ, ಅವರ ಪತಿ ನಾಗರಾಜು ಹಾಗೂ ಹತ್ತಿರದಲ್ಲಿದ್ದ ಇತರರು ಧಾವಿಸಿ ಬಂದು ಕಾಡು ಪ್ರಾಣಿಯನ್ನು ಓಡಿಸಿದರು.

ದಾಳಿಯಲ್ಲಿ ಮಹಿಳೆಯ ತಲೆ ಬಹುತೇಕ ಗಾಯವಾಗಿದೆ ಮತ್ತು ಅವರ ಕೈಗಳು ಸಹ ತೀವ್ರವಾಗಿ ಗಾಯಗೊಂಡಿದ್ದವು.

ರೇಂಜ್ ಫಾರೆಸ್ಟ್ ಆಫೀಸರ್ ಮುತ್ತುರಾಜು ಸ್ಥಳಕ್ಕೆ ಭೇಟಿ ನೀಡಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಮಹಿಳೆಯ ಚಿಕಿತ್ಸೆಗೆ ಸಹಾಯ ಮಾಡಲಾಗುವುದು ಎಂದು ಅರಣ್ಯ ಅಧಿಕಾರಿ ಸುರೇಶ್ ತಿಳಿಸಿದ್ದಾರೆ. ಸ್ಥಳದಲ್ಲಿ ಬೋನ್ ಇರಿಸಿ ಕರಡಿಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Representational image
ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ಮಾಡಿ, ಶವವನ್ನು ಕಾಡಿಗೆ ಎಳೆದೊಯ್ದ ಕರಡಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com