ವೈದ್ಯರ ಪ್ರಿಸ್ಕ್ರಿಪ್ಷನ್ ಕೈಬರಹ ಸುಧಾರಿಸಲು ಡಾ. ಶಾಂತಗಿರಿ ಮಲ್ಲಪ್ಪ ವಿಶಿಷ್ಟ ಕ್ರಮ; ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಲು ತರಬೇತಿ!

2003 ರಲ್ಲಿ, ಡಾ. ಶಾಂತಗಿರಿ ಅವರು ಪ್ರಿಸ್ಕ್ರಿಪ್ಷನ್‌ಗಳ ಸ್ಪಷ್ಟತೆಯನ್ನು ಸುಧಾರಿಸುವ ಗುರಿಯೊಂದಿಗೆ ಕರ್ನಾಟಕ ರಾಜ್ಯ ವೈದ್ಯರ ಕೈಬರಹ ಸುಧಾರಣಾ ಸಂಘವನ್ನು ಸ್ಥಾಪಿಸಿದರು.
Dr Shantagiri at his clinic; Medicine prescription written in capital letters
ಡಾ. ಶಾಂತಗಿರಿ ಮಲ್ಲಪ್ಪ - ಕ್ಯಾಪಿಟಲ್ ಅಕ್ಷರಗಳಲ್ಲಿ ಪ್ರಿಸ್ಕ್ರಿಪ್ಷನ್‌
Updated on

ಗದಗ: ರಾಜ್ಯದ ವೈದ್ಯರೊಬ್ಬರು ಎರಡು ದಶಕಗಳಿಗೂ ಹೆಚ್ಚು ಕಾಲ ವೈದ್ಯಕೀಯ ವೃತ್ತಿಪರರಲ್ಲಿ ಸ್ಪಷ್ಟವಾದ ಕೈಬರಹವನ್ನು ಉತ್ತೇಜಿಸುವ ಮೂಲಕ ಪ್ರಿಸ್ಕ್ರಿಪ್ಷನ್ ಬರೆಯುವ ವಿಧಾನದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದ್ದಾರೆ.

48 ವರ್ಷದ ಡಾ. ಶಾಂತಗಿರಿ ಮಲ್ಲಪ್ಪ ಅವರು ನಿರಂತರವಾಗಿ ಇಂಗ್ಲಿಷ್‌ನಲ್ಲಿ ಕ್ಯಾಪಿಟಲ್ ಅಕ್ಷರಗಳಲ್ಲಿ ಪ್ರಿಸ್ಕ್ರಿಪ್ಷನ್‌ಗಳನ್ನು ಬರೆಯುತ್ತಿದ್ದಾರೆ. ವೈದ್ಯರ ಕೈಬರಹ ಸುಲಭವಾಗಿ ಓದಲು ಸಾಧ್ಯವಾಗದ ಕಾರಣ ಔಷಧ ಮಳಿಗೆಗಳ ಸಿಬ್ಬಂದಿ ತಪ್ಪಾಗಿ ಔಷಧ ನೀಡುವ ಸಾಧ್ಯತೆ ಇದೆ. ಇದರಿಂದ ರೋಗಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಗಂಭೀರ ಅಡ್ಡ ಪರಿಣಾಮ ಬೀರಲಿದೆ. ಇದನ್ನು ತಡೆಗಟ್ಟಲು ನೂರಾರು ವೈದ್ಯರಿಗೆ ಸ್ಪಷ್ಟವಾದ ಕೈಬರಹ ಅಭ್ಯಾಸ ಮಾಡಿಕೊಳ್ಳಲು ತರಬೇತಿ ನೀಡುತ್ತಿದ್ದಾರೆ.

2003 ರಲ್ಲಿ, ಡಾ. ಶಾಂತಗಿರಿ ಅವರು ಪ್ರಿಸ್ಕ್ರಿಪ್ಷನ್‌ಗಳ ಸ್ಪಷ್ಟತೆಯನ್ನು ಸುಧಾರಿಸುವ ಗುರಿಯೊಂದಿಗೆ ಕರ್ನಾಟಕ ರಾಜ್ಯ ವೈದ್ಯರ ಕೈಬರಹ ಸುಧಾರಣಾ ಸಂಘವನ್ನು ಸ್ಥಾಪಿಸಿದರು. ಅಂದಿನಿಂದ, ಕೈಬರಹ ತಜ್ಞರು ಮತ್ತು ಸಮಾನ ಮನಸ್ಕ ವೈದ್ಯರೊಂದಿಗೆ ಕರ್ನಾಟಕದಾದ್ಯಂತ ನೂರಾರು ಕೈಬರಹ ಸುಧಾರಣಾ ಶಿಬಿರಗಳನ್ನು ಆಯೋಜಿಸಿದ್ದಾರೆ. ಸಾವಿರಾರು ವೈದ್ಯರು ಅವರ ಈ ಉಪಕ್ರಮದಿಂದ ಪ್ರಯೋಜನ ಪಡೆದಿದ್ದಾರೆ ಮತ್ತು ಈ ಸಂಘವು ಈಗ 22 ನೇ ವರ್ಷಕ್ಕೆ ಕಾಲಿಟ್ಟಿದೆ.

Dr Shantagiri at his clinic; Medicine prescription written in capital letters
'ಕನ್ನಡದಲ್ಲಿ ಕಡ್ಡಾಯ ವೈದ್ಯಕೀಯ ಪ್ರಿಸ್ಕ್ರಿಪ್ಷನ್': ಅರ್ಥೈಸಿಕೊಳ್ಳುವುದರಲ್ಲಿ ಸ್ವಲ್ಪ ಎಡವಿದರೂ ರೋಗಿಗಳಿಗೆ ಅಪಾಯ ಎದುರಾಗಬಹುದು; ಸರ್ಕಾರ ಕಳವಳ

ಮೂಲತಃ ಗದಗ ಜಿಲ್ಲೆಯ ಹುಲ್ಕೋಟಿಯವರಾದ ಡಾ. ಶಾಂತಗಿರಿ ಅವರು ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅಸ್ಪಷ್ಟವಾದ ಪ್ರಿಸ್ಕ್ರಿಪ್ಷನ್‌ಗಳನ್ನು ಗಮನಿಸಿದ ನಂತರ ಅವರಿಗೆ ಈ ಆಲೋಚನೆ ಹೊಳೆಯಿತು. ವಿಶೇಷವಾಗಿ ಅರ್ಕಾಮೈನ್ ಮತ್ತು ಆರ್ಟಾಮೈನ್‌ನಂತಹ ಇದೇ ರೀತಿಯ ಕಾಗುಣಿತ ಔಷಧಿಗಳ ನಡುವಿನ ಗೊಂದಲವನ್ನು ನಿವಾರಿಸಲು, ಅವರು ಎಲ್ಲಾ ಪ್ರಿಸ್ಕ್ರಿಪ್ಷನ್‌ಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲು ಪ್ರಾರಂಭಿಸಿದರು. ಈ ಅಭ್ಯಾಸವನ್ನು ಅವರು ಇಂದಿಗೂ ಅನುಸರಿಸುತ್ತಿದ್ದಾರೆ.

ಮಧುಮೇಹ ತಜ್ಞ ಡಾ. ಕೆ.ಎನ್. ಪ್ರಸನ್ನಕುಮಾರ್, ದಂತವೈದ್ಯ ಡಾ. ಪಿ. ಲೋಕೇಶ್ ಮತ್ತು ವೈದ್ಯೆ ಡಾ. ಮಮತಾ ಮುಂತಾದ ವೈದ್ಯರು ತಮ್ಮ ಅಭಿಯಾನಗಳನ್ನು ಅನುಸರಿಸಿ ಈ ವಿಧಾನವನ್ನು ಅಳವಡಿಸಿಕೊಂಡಿಸಿದ್ದಾರೆ.

ಇದೀಗ ಕರ್ನಾಟಕವನ್ನು ಮೀರಿ ಇತರ ರಾಜ್ಯಗಳ ವೈದ್ಯರನ್ನು ತಲುಪುವ ಗುರಿಯೊಂದಿಗೆ, ಡಾ. ಶಾಂತಗಿರಿ ಅವರು ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನದಂದು ಆನ್‌ಲೈನ್ ಜಾಗೃತಿ ಕಾರ್ಯಕ್ರಮ ಆರಂಭಿಸಿದ್ದಾರೆ. ಭಾರತದಾದ್ಯಂತ ಹೆಚ್ಚಿನ ವೈದ್ಯರು ಕೈಬರಹ ಚಳುವಳಿಗೆ ಸೇರಲು ಮತ್ತು ಅವರ ಸಂಘದ ಸದಸ್ಯರಾಗಲು ಪ್ರೋತ್ಸಾಹಿಸುವುದು ಅವರ ಉದ್ದೇಶವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com