ಉಡುಪಿ: 3.84 ಲಕ್ಷ ರೂ ಮೌಲ್ಯದ ಕಟ್ಟಡ ಸಾಮಾಗ್ರಿ ಕಳ್ಳತನ ಆರೋಪ, ಇಂಜಿನಿಯರ್ ವಿರುದ್ಧ ದೂರು!

ಈ ಸಂಬಂಧ ಪುಣೆ ಮೂಲದ ಶ್ರೀ ಎಂಟರ್‌ಪ್ರೈಸಸ್‌ನ ಸುರಕ್ಷತಾ ಉಸ್ತುವಾರಿ ಕುಶಾಲಾ ದೂರು ದಾಖಲಿಸಿದ್ದಾರೆ. ಜೂನ್ 12 ರಂದು ದಾಸ್ತಾನು ಪರಿಶೀಲನೆ ವೇಳೆ ಕಳ್ಳತನ ಪತ್ತೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
Casual Images
ಸಾಂದರ್ಭಿಕ ಚಿತ್ರ
Updated on

ಉಡುಪಿ: ಖಾಸಗಿ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಲಾಗುತ್ತಿದ್ದ ಸ್ಥಳದಿಂದ ರೂ. 3.84 ಲಕ್ಷ ಮೌಲ್ಯದ ಅಲ್ಯೂಮಿನಿಯಂ ಮತ್ತಿತರ ಸಾಮಗ್ರಿಗಳನ್ನು ಕಳವು ಮಾಡಿದ ಆರೋಪದ ಮೇಲೆ ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಸಂಬಂಧ ಪುಣೆ ಮೂಲದ ಶ್ರೀ ಎಂಟರ್‌ಪ್ರೈಸಸ್‌ನ ಸುರಕ್ಷತಾ ಉಸ್ತುವಾರಿ ಕುಶಾಲಾ ದೂರು ದಾಖಲಿಸಿದ್ದಾರೆ. ಜೂನ್ 12 ರಂದು ದಾಸ್ತಾನು ಪರಿಶೀಲನೆ ವೇಳೆ ಕಳ್ಳತನ ಪತ್ತೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕಟ್ಟಡ ಸಾಮಾಗ್ರಿಗಳನ್ನು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸ್ಥಳಕ್ಕೆ ತಲುಪಿಸಲಾಗಿತ್ತು. ಏಪ್ರಿಲ್ 21 ನಂತರ ಬಿಹಾರದ ಇಂಜಿನಿಯರ್ ಅನುರಾಗ್ ಕುಮಾರ್, ಕಾಮಗಾರಿ ಕುರಿತು ವರದಿಯನ್ನು ನಿಲ್ಲಿಸಿದ ನಂತರ ಅವರ ಮೇಲೆ ಅನುಮಾನ ಉಂಟಾಗಿರುವುದಾಗಿ ದೂರಿನಲ್ಲಿ ಹೇಳಲಾಗಿತ್ತು.

ಆತ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಆದರೆ ಇನ್ನೂ ಸಾಮಗ್ರಿಗಳನ್ನು ಹಿಂದಿರುಗಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಮಲ್ಪೆ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Casual Images
ಕುಖ್ಯಾತ ಕಳ್ಳನಾದ ಚಿಂದಿ ಆಯುವ ವ್ಯಕ್ತಿ: ನಕಲಿ ಕೀ ಬಳಸಿ ಕಳ್ಳತನ; 75 ಲಕ್ಷ ರೂ ಮೌಲ್ಯದ ವಸ್ತುಗಳು ವಶಕ್ಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com