ಮೌನ ಮುರಿದ ಸಿದ್ದರಾಮಯ್ಯ: ಇದರಲ್ಲಿ ನನ್ನ ತಪ್ಪೇನು? 2 ಗಂಟೆಗಳ ಕಾಲ ನನಗೆ ಘಟನೆ ಬಗ್ಗೆ ತಿಳಿಸಿರಲಿಲ್ಲ!

ನನ್ನನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಹ್ವಾನಿಸಿರಲಿಲ್ಲ. ಮಧ್ಯಾಹ್ನ 3.50 ಕ್ಕೆ ಕಾಲ್ತುಳಿತ ಸಂಭವಿಸಿದೆ, ಆದರೆ ಸಂಜೆ 5.45 ಕ್ಕೆ ನನಗೆ ಮಾಹಿತಿ ನೀಡಲಾಯಿತು.
Siddaramaiah
ಸಿದ್ದರಾಮಯ್ಯANI
Updated on

ಬೆಂಗಳೂರು: ಆರ್ ಸಿಬಿ ವಿಜಯೋತ್ಸವ ಆಚರಣೆ ಸಂಬಂಧ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ಮುರಿದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆಗಳು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ದುರಂತದ ದಿನದಂದು ವಿಧಾನಸೌಧದಲ್ಲಿ ಹಾಜರಿದ್ದ ಬಗ್ಗೆ ಸ್ಪಷ್ಟಪಡಿಸಿದ ಅವರು, "ನನ್ನನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಹ್ವಾನಿಸಲಾಗಿಲ್ಲ. ಮಧ್ಯಾಹ್ನ 3.50 ಕ್ಕೆ ಕಾಲ್ತುಳಿತ ಸಂಭವಿಸಿದೆ, ಆದರೆ ಸಂಜೆ 5.45 ಕ್ಕೆ ನನಗೆ ಮಾಹಿತಿ ನೀಡಲಾಯಿತು. ನಗರ ಪೊಲೀಸ್ ಆಯುಕ್ತರು ನನಗೆ ಮೊದಲು ಮಾಹಿತಿ ನೀಡಬೇಕಿತ್ತು. ಆದರೆ ನನಗೆ ಮಾಹಿತಿ ನೀಡಿಲ್ಲ. ಕರ್ತವ್ಯಲೋಪ ಮಾಡಿದವರ ಮೇಲೆ ಕ್ರಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ನಗರ ಪೊಲೀಸ್​ ಆಯುಕ್ತ ದಯಾನಂದ ಅವರ ಅಮಾನತ್ತನ್ನು ಸಮರ್ಥಿಸಿಕೊಂಡರು

ಪೊಲೀಸ್ ಅಧಿಕಾರಿಗಳನ್ನು ಬೆದರಿಸಿದ್ದಾರೆ ಎಂದು ಬಿಜೆಪಿ ಮತ್ತು ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ಆರೋಪಗಳನ್ನು ತಳ್ಳಿಹಾಕಿದ ಅವರು, "ಇದರಲ್ಲಿ ನನ್ನ ತಪ್ಪೇನು? ಪೊಲೀಸರ ಮೇಲೆ ಬಿಜೆಪಿಗೆ ಹಠಾತ್ ಪ್ರೀತಿಬಂದಿರುವುದು ರಾಜಕೀಯ ನಾಟಕವಲ್ಲದೆ ಬೇರೇನೂ ಅಲ್ಲ. ಅವರೇ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು - ನಾವು ಅದಕ್ಕೆ ಒಪ್ಪಿದ್ದೇವೆ. ಹಾಗಾದರೆ ಈಗ ಸಮಸ್ಯೆ ಏನು? ಎಂದು ಸಿಎಂ ಪ್ರಶ್ನಿಸಿದ್ದಾರೆ.

ವಿಧಾನಸೌಧದ ಭದ್ರತಾ ಮುಖ್ಯಸ್ಥ ಡಿಸಿಪಿ ಎಂ.ಎನ್. ಕರಿಬಸವನ ಗೌಡ ಅವರು ಸೌಧದಲ್ಲಿ ಸನ್ಮಾನ ಸಮಾರಂಭ ನಡೆಸದಂತೆ ಎಚ್ಚರಿಕೆ ನೀಡಿದಾಗ, ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮಕ್ಕೆ ಷರತ್ತುಗಳನ್ನು ವಿಧಿಸಿದ್ದರು ಎಂದು ಸ್ಪಷ್ಟಪಡಿಸಿದರು, ಆದರೆ ಅವುಗಳನ್ನು ನಿರ್ವಹಿಸಲಾಯಿತು. ಪೊಲೀಸರು ತೆಗೆದುಕೊಂಡ ಕ್ರಮಗಳಿಗೆ ಒಪ್ಪಿಕೊಂಡು ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ನಡೆಸಿದ್ದಾರೆ, ಅದರಲ್ಲಿ ತಪ್ಪು ಎಲ್ಲಿದೆ" ಎಂದು ಅವರು ಕೇಳಿದರು.

Siddaramaiah
ಸಿದ್ದರಾಮಯ್ಯ, ಡಿಕೆಶಿ ಕೈಗೆ ರಕ್ತ ಅಂಟಿದೆ, ಧಮ್‌ ಇದ್ರೆ ಅವರ ರಾಜೀನಾಮೆ ಪಡೆಯಿರಿ: ಕಾಂಗ್ರೆಸ್ ಹೈಕಮಾಂಡ್ ಗೆ ಶೋಭಾ ಸವಾಲು

ನನಗೆ ನೇರವಾಗಿ ಮಾಹಿತಿ ನೀಡಲಾಗಿಲ್ಲ. ಘಟನೆ ವಿಧಾನಸೌಧದ ಒಳಗೆ ನಡೆದಿಲ್ಲ. ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ನಾವು ಆಯೋಜಿಸಿಲ್ಲ. ಸತ್ಯವತಿಯನ್ನು ದೂಷಿಸುವುದು ಸರಿಯಲ್ಲ. ಘಟನೆ ಬೇರೆಡೆ ನಡೆದಾಗ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬೇಕು" ಎಂದು ಅವರು ಕೇಳಿದರು.

ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡುವುದು ಪೊಲೀಸ್ ಆಯುಕ್ತರ ಜವಾಬ್ದಾರಿಯಾಗಿದೆ , ಅದು ಆಗಲಿಲ್ಲ. "ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ ಎಂದು ನನ್ನ ಕಾರ್ಯದರ್ಶಿ ನನಗೆ ಹೇಳಿದರು. ಅದರ ಆಧಾರದ ಮೇಲೆ ನಾನು ಒಪ್ಪಿದೆ ಎಂದು ಎಂದು ಮುಖ್ಯಮಂತ್ರಿ ಹೇಳಿದರು.

ಪೊಲೀಸ್ ಆಯುಕ್ತರನ್ನು ಮಾತ್ರವಲ್ಲದೆ ಐದು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ, ತಮ್ಮ ಆಪ್ತ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ಸಹ ತೆಗೆದುಹಾಕಲಾಗಿದೆ. "ನಾವು ನಿಜವಾಗಿಯೂ ತಪ್ಪಿತಸ್ಥರಾಗಿದ್ದರೆ, ಅದು ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗುತ್ತಿತ್ತು. ಆದರೆ ನಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರದ ವರ್ಚಸ್ಸಿಗೆ ಕಾಲ್ತುಳಿತ ಪ್ರಕರಣ ಧಕ್ಕೆ ತಂದಿದೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಉದ್ಘಾಟನಾ ದಿನದಂದು ಸೇತುವೆ ಕುಸಿದು ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದಾಗ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರು ಹೇಳಿದರು.

ಆರ್‌ಸಿಬಿ ರೋಡ್ ಶೋಗೆ ಅವಕಾಶ ನೀಡದಿದ್ದಕ್ಕಾಗಿ ಬಿಜೆಪಿ ಆರಂಭದಲ್ಲಿ ಸರ್ಕಾರ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಟೀಕಿಸಿತ್ತು ಎಂದು ಅವರು ಗಮನಸೆಳೆದರು. ಸರ್ಕಾರವು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಹತ್ತಿರದಿಂದ ನೋಡಲು ಪೆರೇಡ್‌ಗೆ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಹೇಳಿತ್ತು. ಆದರೆ ಕಾಲ್ತುಳಿತದ ನಂತರ ಅವರು ತಮ್ಮ ವರಸೆ ಬದಲಾಯಿಸಿದರು ಎಂದು ಅವರು ಹೇಳಿದರು.

ಕಳೆದ ಏಳು ತಿಂಗಳಿನಿಂದ 5,000 ನರೇಗಾ ಉದ್ಯೋಗಿಗಳಿಗೆ ಸಂಬಳ ಪಾವತಿಸದಿರುವ ಬಗ್ಗೆ ಮಾತನಾಡಿದ ಅವರು ಕೇಂದ್ರವು ಎನ್‌ಆರ್‌ಇಜಿಎ ಹಣವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ, ಇದು ಸಮಸ್ಯೆಯನ್ನುಂಟುಮಾಡುತ್ತಿದೆ ಎಂದು ಅವರು ಹೇಳಿದರು. ಇದು ಇತರ ರಾಜ್ಯಗಳಲ್ಲಿಯೂ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com