Nagarathnamma (C) with Upa Lokayukta officers
ಉಪ ಲೋಕಾಯುಕ್ತರ ಜೊತೆ ಅಡುಗೆ ಕೆಲಸದ ಮಹಿಳೆ ನಾಗರತ್ನಮ್ಮ(Photo | Express)

ಮರುಕಳಿಸಿದ ತಬರನ ಕಥೆ: ಉಪ ಲೋಕಾಯುಕ್ತರ ಮಧ್ಯಪ್ರವೇಶ; 9 ವರ್ಷದ ನಂತರ ಅಡುಗೆ ಕೆಲಸದ ಮಹಿಳೆಗೆ ಸಿಕ್ತು ಪಿಂಚಣಿ!

ಆರೋಗ್ಯ ಸಮಸ್ಯೆಗಳಿಂದಾಗಿ ನಾನು 2016 ರಲ್ಲಿ ಸ್ವಯಂಪ್ರೇರಿತ ನಿವೃತ್ತಿ ಪಡೆದಿದ್ದೇನೆ, ಆದರೆ ನನಗೆ ನನ್ನ ನಿವೃತ್ತಿ ಸೌಲಭ್ಯ ಮತ್ತು ಪಿಂಚಣಿ ಸಿಗಲಿಲ್ಲ. ಅಂತಿಮವಾಗಿ, ನಾನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರನ್ನು ಸಂಪರ್ಕಿಸಿದೆ.
Published on

ಬೆಂಗಳೂರು: ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಸರ್ಕಾರಿ ಸೇವಕನೊಬ್ಬ ನಡೆಸುವ ಹೋರಾಟದ ಕಥಾವಸ್ತುವುಳ್ಳ ಪೂರ್ಣಚಂದ್ರ ತೇಜಸ್ವಿ ಅವರ 'ತಬರನ ಕಥೆ' ಮತ್ತೆ ಮರುಕಳಿಸಿದೆ.

2016 ರಲ್ಲಿ 23 ವರ್ಷಗಳ ಸೇವೆಯ ನಂತರ ಸಮಾಜ ಸೇವಾ ಇಲಾಖೆಯಿಂದ ಸ್ವಯಂಪ್ರೇರಿತ ನಿವೃತ್ತಿ ಪಡೆದ ಅಡುಗೆಯವರಾದ ನಾಗರತ್ನಮ್ಮ ಅವರ ಹೋರಾಟವೂ ಇದೇ ರೀತಿ ಇದೆ. ಕೋಲಾರ ಜಿಲ್ಲೆಯ ಮಾಲೂರಿನ ಮಾರುತಿ ಲೇಔಟ್ ನಿವಾಸಿ ನಾಗರತ್ನಮ್ಮ ಅವರಿಗೆ ನ್ಯಾಯ ದೊರಕಿಸಿಕೊಡಲು ಉಪ ಲೋಕಾಯುಕ್ತರ ಮದ್ಯ ಪ್ರವೇಶಿಸುವ ಅಗತ್ಯವಿತ್ತು.

ಆರೋಗ್ಯ ಸಮಸ್ಯೆಗಳಿಂದಾಗಿ ನಾನು 2016 ರಲ್ಲಿ ಸ್ವಯಂಪ್ರೇರಿತ ನಿವೃತ್ತಿ ಪಡೆದಿದ್ದೇನೆ, ಆದರೆ ನನಗೆ ನನ್ನ ನಿವೃತ್ತಿ ಸೌಲಭ್ಯ ಮತ್ತು ಪಿಂಚಣಿ ಸಿಗಲಿಲ್ಲ. ಅಂತಿಮವಾಗಿ, ನಾನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರನ್ನು ಸಂಪರ್ಕಿಸಿದೆ, ಅವರ ಮದ್ಯಸ್ಥಿಕೆಯಿಂದ ನನಗೆ ಈಗ 20.21 ಲಕ್ಷ ರೂಪಾಯಿಗಳ ಪಿಂಚಣಿಯೊಂದಿಗೆ ನನ್ನ ನಿವೃತ್ತಿ ಸೌಲಭ್ಯಗಳು ಸಿಗುವಂತೆ ಮಾಡಿದರು. ನನಗೆ ನ್ಯಾಯ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ" ಎಂದು ನಾಗರತ್ನಮ್ಮ ಹೇಳಿದ್ದಾರೆ.

ಇದು ದುರದೃಷ್ಟಕರ ಪ್ರಕರಣ. ಇದು ಸಂವಿಧಾನದ 14 ಮತ್ತು 21 ನೇ ವಿಧಿಗಳ ತತ್ವಗಳಿಗೆ ವಿರುದ್ಧವಾಗಿದೆ. ಜೂನ್ 2023 ರಲ್ಲಿ ದೂರು ದಾಖಲಾಗಿತ್ತು, ಆದರೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಮಾರ್ಚ್ 5, 2025 ರಂದು ಅಧಿಕಾರಿಗಳಿಂದ ವಿವರಣೆ ಕೋರಿ ನ್ಯಾಯಮೂರ್ತಿ ವೀರಪ್ಪ ಆದೇಶ ಹೊರಡಿಸಿದರು.

Nagarathnamma (C) with Upa Lokayukta officers
ಬೆಂಗಳೂರಿನ ಕೆರೆಗಳ ನೀರು ಕೃಷಿಗೂ ಯೋಗ್ಯವಲ್ಲ: ಲೋಕಾಯುಕ್ತ ಪರಿಶೀಲನೆ ವೇಳೆ ಬಹಿರಂಗ!

ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-1 ರ ಸಹಾಯಕ ನಿರ್ದೇಶಕ ವಿ. ಶಿವಕುಮಾರ್, ಅಕೌಂಟೆಂಟ್ ಜನರಲ್ (ಎಜಿ) ಆಕ್ಷೇಪಣೆ ಸಲ್ಲಿಸಿದ್ದರಿಂದ ಸಮಸ್ಯೆ ವಿಳಂಬವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪಿಂಚಣಿ ವಿತರಣೆಗೆ ಸಂಬಂಧಿಸಿದ ದಾಖಲೆಗಳನ್ನು ಅವರು ಒಂದು ವಾರದೊಳಗೆ ಎಜಿಗೆ ಸಲ್ಲಿಸಿದರು , ಅದನ್ನು ಎಜಿ ಮುಂದುವರಿಸಿ ಪಿಂಚಣಿಯನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ, ದೂರುದಾರರು ಅರ್ಹರಾಗಿರುವ ಹಣದ ಮೇಲೆ ಶೇ. 10 ರಷ್ಟು ಬಡ್ಡಿಗೆ ಅರ್ಹರು ಎಂದು ಅವರು ಹೇಳಿದರು.

ನ್ಯಾಯಮೂರ್ತಿ ವೀರಪ್ಪ ಅವರು ಅಧಿಕಾರಿಗಳಿಗೆ ಮೇ 7 ರೊಳಗೆ ಪಿಂಚಣಿ ಮತ್ತು ಇತರ ಪ್ರಯೋಜನಗಳನ್ನು ನೀಡಲು ನಿರ್ದೇಶನ ನೀಡಿದರು, ಆದೇಶದ ಪ್ರತಿಯನ್ನು ಎಜಿಗೆ ಕಳುಹಿಸಲು ಸೂಚಿಸಿದರು. ಸರ್ಕಾರವು ಜೂನ್ 12 ರಂದು ನಾಗರತ್ನಮ್ಮ ಅವರಿಗೆ ಮರಣ ಮತ್ತು ನಿವೃತ್ತಿ ಗ್ರಾಚ್ಯುಟಿ ಮತ್ತು ಪಿಂಚಣಿಯ ಮೌಲ್ಯ ಸೇರಿದಂತೆ ಒಟ್ಟು 20.21 ಲಕ್ಷ ರೂ.ಗಳನ್ನು ಪಾವತಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com