ಕಬಿನಿ ಅಣೆಕಟ್ಟೆಯಲ್ಲಿ ಬಿರುಕು: ನಮ್ಮ ರಾಜ್ಯದ ಜಲಾಶಯಗಳು ಎಷ್ಟು ಸುರಕ್ಷಿತ?

ನೀರಾವರಿ ಇಲಾಖೆಯ ಅಧಿಕಾರಿಗಳು ಸೋರಿಕೆಯನ್ನು ಗಮನಿಸಿದ್ದು, ರಚನೆಯ ಸ್ಥಿತಿಯನ್ನು ದಾಖಲಿಸಲು ರೋಬೋಟ್‌ಗಳು ಮತ್ತು ನೀರೊಳಗಿನ ಕ್ಯಾಮೆರಾಗಳನ್ನು ನಿಯೋಜಿಸಿದ್ದಾರೆ.
Kabini Dam
ಕಬಿನಿ ಜಲಾಶಯ
Updated on

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿರುವ ಏಳಕ್ಕೂ ಹೆಚ್ಚು ಅಣೆಕಟ್ಟುಗಳು, ಮುಖ್ಯವಾಗಿ ಕಬಿನಿ, ತಾರಕ, ನುಗು, ಸುವರ್ಣಾವತಿ, ಚಿಕ್ಕಹೊಳೆ, ಗುಂಡಾಲ್ ಮತ್ತು ಉಡುತೊರೆಹಾಳ್ ಅಣೆಕಟ್ಟುಗಳು 40 ವರ್ಷಗಳಿಗಿಂತ ಹಳೇಯ ನಿರ್ಮಾಣವಾಗಿದ್ದು, ಇವುಗಳ ಉತ್ತಮ ನಿರ್ವಹಣೆ ಮತ್ತು ಸುರಕ್ಷತೆಗಾಗಿ ಗಮನ ಹರಿಸುವ ಅಗತ್ಯವಿದೆ.

ಕಬಿನಿ ಅಣೆಕಟ್ಟಿಗೆ ತಕ್ಷಣದ ಬೆದರಿಕೆಯನ್ನು ತಜ್ಞರು ತಳ್ಳಿಹಾಕುತ್ತಾರೆ. ಆದಾಗ್ಯೂ, ಕುಳಿ ಮತ್ತು ಬಿರುಕುಗಳನ್ನು ತುಂಬುವಲ್ಲಿ ನಿರ್ಲಕ್ಷ್ಯ ಅಥವಾ ವಿಳಂಬ ಮಾಡಿದರೆ ಜಲಾಶಯದ ರಚನೆ ದುರ್ಬಲಗೊಳಿಸುತ್ತದೆ ಎಂದು ತಜ್ಞರು ಕಳವಳ ವ್ಯಕ್ತ ಪಡಿಸಿದ್ದಾರೆ.

ನೀರಾವರಿ ಇಲಾಖೆಯ ಅಧಿಕಾರಿಗಳು ಸೋರಿಕೆಯನ್ನು ಗಮನಿಸಿದ್ದು, ರಚನೆಯ ಸ್ಥಿತಿಯನ್ನು ದಾಖಲಿಸಲು ರೋಬೋಟ್‌ಗಳು ಮತ್ತು ನೀರೊಳಗಿನ ಕ್ಯಾಮೆರಾಗಳನ್ನು ನಿಯೋಜಿಸಿದ್ದಾರೆ. ಬಿರುಕುಗಳು ಮತ್ತು ಕುಳಿಗಳು 50-ಸೆಂ.ಮೀ ಗಿಂತ ಹೆಚ್ಚು ಆಳದಲ್ಲಿವೆ ಎಂಬ ವಿವರಗಳೊಂದಿಗೆ ತಜ್ಞರ ಸಮಿತಿ ಮತ್ತು ಕಾವೇರಿ ನೀರಾವರಿ ನಿಗಮ ಲಿಮಿಟೆಡ್ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ನೀರಿನಲ್ಲಿ ಹೆಚ್ಚಿನ ಪ್ರಕ್ಷುಬ್ಧತೆಯಿಂದಾಗಿ ಬಿರುಕುಗಳನ್ನು ಮುಚ್ಚಲು ಎಂಜಿನಿಯರ್‌ಗಳು ತಕ್ಷಣ ಕೆಲಸವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ.

ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷರನ್ನು ಒಳಗೊಂಡ ಅಣೆಕಟ್ಟು ಸುರಕ್ಷತಾ ಪರಿಶೀಲನಾ ತಂಡ ಮತ್ತು ಅಣೆಕಟ್ಟು ಸುರಕ್ಷತಾ ಸಮಿತಿಯು ಅಣೆಕಟ್ಟುಗಳ ಸ್ಥಿತಿಯನ್ನು ಅಧ್ಯಯನ ಮಾಡಲು ಪರಿಶೀಲಿಸಿತು. ನಿರಂತರ ಮಳೆಯಿಂದಾಗಿ ಚಿಕ್ಕಹೊಳೆ ಅಣೆಕಟ್ಟು ತುಂಬಿ ತುಳುಕುತ್ತಿತ್ತು ಆದರೆ ರೈತರಿಗೆ ಯಾವುದೇ ಪರಿಹಾರ ಸಿಗಲಿಲ್ಲ ಏಕೆಂದರೆ ಸ್ಲೂಯಿಸ್ ಗೇಟ್‌ಗಳ ಕಳಪೆ ನಿರ್ವಹಣೆಯಿಂದಾಗಿ ನೀರು ವ್ಯರ್ಥವಾಯಿತು. ಸ್ಲೂಯಿಸ್ ಗೇಟ್ ಕಾರ್ಯನಿರ್ವಹಿಸಲು ಅಥವಾ ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗದ ಕಾರಣ ಪ್ರತಿದಿನ ಸುಮಾರು 6 ಕ್ಯೂಸೆಕ್ ನೀರು ವ್ಯರ್ಥವಾಗುತ್ತಿದೆ.

Kabini Dam
ಕಬಿನಿ ಜಲಾಶಯದಲ್ಲಿ ಬಿರುಕು: ಅಪಾಯದ ಅಂಚಿನಲ್ಲಿ ಕರ್ನಾಟಕ- ತಮಿಳುನಾಡಿನ ಜೀವನಾಡಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com