ಮಂಗಳೂರು ಕರಾವಳಿಯಲ್ಲಿ ಭಾರೀ ಕಡಲ್ಕೊರೆತ, ನಿವಾಸಿಗಳ ಸ್ಥಳಾಂತರ: ಕುಡಿಯುವ ನೀರಿಗೆ ಹಾಹಾಕಾರ

ಕಳೆದ 24 ಗಂಟೆಗಳಲ್ಲಿ ಮಳೆಯ ಸಮಯದಲ್ಲಿ 316 ವಿದ್ಯುತ್ ಕಂಬಗಳು, 11 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 3 ಸೇತುವೆಗಳು ಹಾನಿಗೊಳಗಾಗಿವೆ.
sea erosion has intensified causing inconvenience to residents along the coastline
ಮಂಗಳೂರಿನಲ್ಲಿ ಕಡಲ್ಕೊರೆತ
Updated on

ಮಂಗಳೂರು: ಭಾರೀ ಮಳೆಯ ನಂತರ, ಮಂಗಳೂರಿನಲ ಕರಾವಳಿ ಭಾಗದಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದ್ದು, ನಿವಾಸಿಗಳು ಸಮಸ್ಯೆಯಲ್ಲಿ ಸಿಲುಕಿದ್ದಾರೆ.

ಸೋಮವಾರ ಸಂಜೆ ಉಚ್ಚಿಲ ಮತ್ತು ಸೋಮೇಶ್ವರದ ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಮಂಗಳವಾರ ಬೆಳಿಗ್ಗೆ ಮಳೆ ಕಡಿಮೆಯಾಗಿ ದ್ದರಿಂದ ಪ್ರಯಾಣಿಕರಿಗೆ ನೆಮ್ಮದಿ ತಂದಿತು, ಆದಾಗ್ಯೂ, ಮಧ್ಯಾಹ್ನದ ನಂತರ ಸಾಧಾರಣ ಮಳೆ ಪುನರಾರಂಭವಾಗಿ ತಡರಾತ್ರಿಯವರೆಗೆ ಮುಂದುವರೆಯಿತು. ಏತನ್ಮಧ್ಯೆ, ಮಾಣಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸದಾಗಿ ಹಾಕಲಾದ ರಸ್ತೆಯ ಒಂದು ಭಾಗ ಕುಸಿದು ಬಂಟ್ವಾಳದಿಂದ ಮಾಣಿಗೆ ಹೋಗುವ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ.

8 ಮನೆಗಳು ಭಾರೀ ಮಳೆಯಿಂದ ಭಾಗಶಃ ಹಾನಿಗೊಳಗಾಗಿವೆ. ಕಳೆದ 24 ಗಂಟೆಗಳಲ್ಲಿ ಮಳೆಯ ಸಮಯದಲ್ಲಿ 316 ವಿದ್ಯುತ್ ಕಂಬಗಳು, 11 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 3 ಸೇತುವೆಗಳು ಹಾನಿಗೊಳಗಾಗಿವೆ. ಕನ್ಯಾನ ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ಅಂದರೆ 359 ಮಿಮೀ ಮಳೆಯಾಗಿದ್ದರೆ, ಮಂಚಿ ಮತ್ತು ಇರಾ ಗ್ರಾಮ ಪಂಚಾಯಿತಿಯಲ್ಲಿ 182 ಮಿಮೀ , 164 ಮಿಮೀ ಮಳೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಿರುವುದರಿಂದ ಪ್ರವಾಸಿಗರು ನದಿ, ಸಮುದ್ರಕ್ಕೆ ಇಳಿಯುವುದನ್ನು ಅಥವಾ ಚಾರಣಕ್ಕೆ ಹೋಗುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರಿಗೆ ನಿರ್ದೇಶನ ನೀಡಿದ್ದಾರೆ.

sea erosion has intensified causing inconvenience to residents along the coastline
ಕೊಡಗು, ವಯನಾಡಿನಲ್ಲಿ ಭಾರೀ ಮಳೆ: ಕೃಷ್ಣರಾಜ ಸಾಗರ, ಕಬಿನಿ ಜಲಾಶಯಗಳಿಗೆ ಜೀವಕಳೆ; ಒಳಹರಿವು ಹೆಚ್ಚಳ

ಸೂಚನೆಗಳನ್ನು ಉಲ್ಲಂಘಿಸುವ ಮೂಲಕ ಯಾವುದೇ ಪ್ರವಾಸಿಗರ ಜೀವಕ್ಕೆ ಅಪಾಯ ಉಂಟಾದರೆ ಅವರೇ ಹೊಣೆಗಾರರಾಗಿರುತ್ತಾರೆ ಎಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ರೆಸಾರ್ಟ್, ಹೋಟೆಲ್ ಮತ್ತು ಹೋಂಸ್ಟೇ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ತುಂಡಾಗಿ ಬಿದ್ದ ವಿದ್ಯುತ್ ತಂತಿಗಳು, ಕಂಬಗಳು ಅಥವಾ ಇತರ ವಿದ್ಯುತ್ ವಸ್ತುಗಳನ್ನು ಮುಟ್ಟದಂತೆ ಸಾರ್ವಜನಿಕರಿಗೆ ಮೆಸ್ಕಾಂ ಎಚ್ಚರಿಕೆ ನೀಡಿದೆ ಮತ್ತು ಯಾವುದೇ ಘಟನೆಯನ್ನು 1912 ಟೋಲ್ ಫ್ರೀ ಸಂಖ್ಯೆ ಅಥವಾ 9483041912 ಗೆ ವರದಿ ಮಾಡಲು ಒತ್ತಾಯಿಸಿದೆ.

ಈ ಮಧ್ಯೆ, ಕಾಟಿಪಳ್ಳ, ಕೃಷ್ಣಾಪುರ ಮತ್ತು ಸುರತ್ಕಲ್‌ನ ಜನರಿಗೆ ಭಾರೀ ಮಳೆಯ ಸಮಯದಲ್ಲಿಯೂ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಡಿವೈಎಫ್‌ಐ ನಾಯಕ ಮುನೀರ್ ಕಾಟಿಪಳ್ಳ ದೂರಿದ್ದಾರೆ.

ಮಂಗಳೂರಿನ ರಸ್ತೆಗಳು ಭಾರೀ ಮಳೆಯಿಂದಾಗಿ ಕೆರೆಗಳಾಗಿ ಮಾರ್ಪಟ್ಟಿವೆ. ಆದರೆ ಸುರತ್ಕಲ್ ಮತ್ತು ಕಾಟಿಪಳ್ಳದ ಕೆಲವು ಭಾಗಗಳಿಗೆ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗಿಲ್ಲ. ನಗರ ಪಾಲಿಕೆ ಈ ಪ್ರದೇಶಗಳಲ್ಲಿ ಪ್ರತಿ ಮೂರು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸುತ್ತದೆ ಮತ್ತು ಈಗ ಅದು ಮತ್ತಷ್ಟು ವಿಳಂಬವಾಗಿದೆ. ತುಂಬೆ ಅಣೆಕಟ್ಟಿನಲ್ಲಿ ಒಡೆದ ಪೈಪ್‌ಗಳು ಮತ್ತು ಹೂಳುಗಳಿಂದಾಗಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದಲ್ಲಿಯೂ ಸಹ ಇಲ್ಲಿನ ಜನರು ಕುಡಿಯಲು ಟ್ಯಾಂಕರ್ ನೀರನ್ನು ಖರೀದಿಸುವುದು ಅನಿವಾರ್ಯವಾಗಿದೆ. ಜನರು ಖಾಲಿ ಮಡಕೆಗಳೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆಎಂದು ಅವರು ಎಚ್ಚರಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com