ಕೊಡಗಿನಲ್ಲಿ ಭಾರಿ ಮಳೆ: ಮರದ ರೆಂಬೆ ಬಿದ್ದು ಕಾಫಿ ಬೆಳೆಗಾರ ಸಾವು; ಜನ ಜೀವನ ಅಸ್ತವ್ಯಸ್ತ

ಸಿದ್ದಾಪುರ ಬಳಿಯ ಮಾಲ್ದಾರೆ ಗ್ರಾಮದಲ್ಲಿ ವಾಸಿಸುವ ಬೆಳೆಗಾರ ವಿಷ್ಣು ಬೆಳ್ಳಿಯಪ್ಪ (64) ಮೃತ ವ್ಯಕ್ತಿ.
Heavy rainfall continued to lash Kodagu even as normalcy across the district was affected
ಕೊಡಗಿನಲ್ಲಿ ಭಾರೀ ಮಳೆ
Updated on

ಮಡಿಕೇರಿ: ಕೊಡಗಿನ ಸಿದ್ದಾಪುರ ಬಳಿ ಮಂಗಳವಾರ ಮರದ ಕೊಂಬೆಯೊಂದು ವ್ಯಕ್ತಿಯ ಮೇಲೆ ಬಿದ್ದ ಪರಿಣಾಮ ಕಾಫಿ ಬೆಳೆಗಾರ ಸಾವನ್ನಪ್ಪಿದ್ದಾನೆ. ಈ ಮಧ್ಯೆ, ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದರೂ ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ.

ಸಿದ್ದಾಪುರ ಬಳಿಯ ಮಾಲ್ದಾರೆ ಗ್ರಾಮದಲ್ಲಿ ವಾಸಿಸುವ ಬೆಳೆಗಾರ ವಿಷ್ಣು ಬೆಳ್ಳಿಯಪ್ಪ (64) ಮೃತ ವ್ಯಕ್ತಿ. ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಪ್ರವಾಹದಿಂದ ಜಲಾವೃತಗೊಂಡ ರಸ್ತೆಗಳು, ಮರಗಳು ಧರೆಗುರುಳಿದ್ದು, ಮನೆಗಳಿಗೆ ಹಾನಿಯಾಗಿದ್ದು ಮತ್ತು ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ಬೆಳಗಿನ ಕೆಲಸ ಮುಗಿಸಿ ಮನೆಯ ಹೊರಗೆ ಕುರ್ಚಿಯ ಮೇಲೆ ಕುಳಿತಿದ್ದಾಗ ಮಾವಿನ ಮರದ ದೊಡ್ಡ ಕೊಂಬೆ ಉರುಳಿಬಿದ್ದಿತ್ತು. ಬೆಳ್ಳಿಯಪ್ಪ ಅವರ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಡಗಿನಲ್ಲಿ ವರದಿಯಾದ ಎರಡನೇ ಸಾವು ಇದಾಗಿದೆ. ಇದಕ್ಕೂ ಮೊದಲು, ಮರ ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಕೊಡಗಿನಲ್ಲಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಗಿದ್ದು ಭಾರೀ ಮಳೆ ಮುಂದುವರೆದಿದೆ. ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಮನೆಗಳು ಹಾನಿಗೊಳಗಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲಾಖೆ ಸಿಬ್ಬಂದಿ ಪರಿಹಾರ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಕರಡಿಗೋಡು, ಹಾರಂಗಿ ಮತ್ತು ಕೂಡಿಗೆ ಮಿತಿಗಳು ಸೇರಿದಂತೆ ಕಾವೇರಿ ನದಿಯ ತಗ್ಗು ಪ್ರದೇಶಗಳ ಮನೆಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದರು.

Heavy rainfall continued to lash Kodagu even as normalcy across the district was affected
ಕೊಡಗು, ವಯನಾಡಿನಲ್ಲಿ ಭಾರೀ ಮಳೆ: ಕೃಷ್ಣರಾಜ ಸಾಗರ, ಕಬಿನಿ ಜಲಾಶಯಗಳಿಗೆ ಜೀವಕಳೆ; ಒಳಹರಿವು ಹೆಚ್ಚಳ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com