ಮಂಡ್ಯ: 786 ಇ-ಖಾತಾ ಕಡತ ನಾಪತ್ತೆ; ಹಲವು ಅಧಿಕಾರಿಗಳಿಗೆ ಶೋ-ಕಾಸ್ ನೋಟಿಸ್ ಜಾರಿ

ನವೆಂಬರ್ 20 ರೊಳಗೆ 786 ಇ-ಖಾತಾ ಫೈಲ್‌ಗಳನ್ನು ಪತ್ತೆಹಚ್ಚಲು ವಿಫಲವಾದರೆ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ(ಕೆಎಸ್‌ಪಿಆರ್‌ಎ) 2010 ರ ಸೆಕ್ಷನ್ 9 ರ ಅಡಿಯಲ್ಲಿ ನಿಮ್ಮ ವಿರುದ್ಧ ದೂರು ದಾಖಲಿಸಲಾಗುವುದು ಎಂದು ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.
Mandya EO issues show-cause notices over 786 missing e-khata files
ಇಂಡುವಾಳು ಗ್ರಾಮ ಪಂಚಾಯತ್‌
Updated on

ಮಂಡ್ಯ: 786 ಇ-ಖಾತಾ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಗುರುವಾರ ಇಂಡುವಾಳು ಗ್ರಾಮ ಪಂಚಾಯತ್‌ನಲ್ಲಿ ಕೆಲಸ ಮಾಡಿದ ಹಲವಾರು ಅಧಿಕಾರಿಗಳಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ನವೆಂಬರ್ 20 ರೊಳಗೆ 786 ಇ-ಖಾತಾ ಫೈಲ್‌ಗಳನ್ನು ಪತ್ತೆಹಚ್ಚಲು ವಿಫಲವಾದರೆ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ(ಕೆಎಸ್‌ಪಿಆರ್‌ಎ) 2010 ರ ಸೆಕ್ಷನ್ 9 ರ ಅಡಿಯಲ್ಲಿ ನಿಮ್ಮ ವಿರುದ್ಧ ದೂರು ದಾಖಲಿಸಲಾಗುವುದು ಎಂದು ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.

"ಮಂಡ್ಯದಲ್ಲಿ 1,281 ಇ-ಖಾತಾ ಫೈಲ್‌ಗಳು ಕಾಣೆಯಾಗಿವೆ" ಎಂಬ ಸುದ್ದಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿದ ಒಂದು ದಿನದ ನಂತರ ಈ ಶೋ-ಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

Mandya EO issues show-cause notices over 786 missing e-khata files
ಮಂಡ್ಯ: ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು!

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರಿಗೆ ಕಾಣೆಯಾದ ಪ್ರಮುಖ ಇ-ಖಾತಾ ಫೈಲ್‌ಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನಗಳ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ದಯಾನಂದ ಮತ್ತು ಕಾರ್ಯದರ್ಶಿ ರಾಣಿ ಎಚ್ ಆರ್ ಅವರು ಏಪ್ರಿಲ್ 1, 2021 ರಿಂದ ಫೆಬ್ರವರಿ 1, 2022 ರವರೆಗೆ ಕೆಲಸ ಮಾಡಿದ್ದಾರೆ ಮತ್ತು ಒಟ್ಟು 229 ಇ-ಖಾತಾ ವಹಿವಾಟುಗಳನ್ನು ನಡೆಸಲಾಗಿದೆ ಮತ್ತು ಕೇವಲ 78 ಫೈಲ್‌ಗಳು ಮಾತ್ರ ಲಭ್ಯವಿದೆ ಎಂದು ಇಒ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 2, 2022 ರಿಂದ ಮೇ 7, 2022 ರವರೆಗೆ, ಪಿಡಿಒ ಎ ಎಸ್ ಸಿದ್ದರಾಜು, ಕಾರ್ಯದರ್ಶಿಗಳಾದ ದಯಾನಂದ, ಬಿ ವಿ ಸೋಮು ಮತ್ತು ಎರಡನೇ ವಿಭಾಗದ ಸಹಾಯಕ ರಾಣಿ ಎಚ್ ಆರ್ ಕೆಲಸ ಮಾಡಿದ್ದಾರೆ. ಈ ವೇಳೆ 238 ಇ-ಖಾತಾ ಮಾಡಲಾಗಿದೆ. ಅದರಲ್ಲಿ ಕೇವಲ 113 ಇ-ಖಾತಾ ಫೈಲ್‌ಗಳು ಮಾತ್ರ ಲಭ್ಯವಿವೆ.

ಅಕ್ಟೋಬರ್ 21, 2022 ರಿಂದ ಆಗಸ್ಟ್ 1, 2023 ರವರೆಗೆ, ಪಿಡಿಒ ವಿಶಾಲ್ ಮೂರ್ತಿ ಎಚ್ ಬಿ, ಕಾರ್ಯದರ್ಶಿ ಬಿ ವಿ ಸೋಮು ಮತ್ತು ಎಸ್‌ಡಿಎ ರಾಣಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಟ್ಟು 264 ಇ-ಖಾತಾಗಳಲ್ಲಿ ಕೇವಲ 162 ಮಾತ್ರ ಲಭ್ಯವಿದ್ದು, ಉಳಿದವುಗಳನ್ನು ಪತ್ತೆಹಚ್ಚಲಾಗಿಲ್ಲ. ಕೊನೆಯದಾಗಿ, ಆಗಸ್ಟ್ 2, 2023 ಮತ್ತು ಮೇ 25, 2025 ರ ನಡುವೆ, ಪಿಡಿಒ ಕೆ ಸಿ ಯೋಗೇಶ್, ಕಾರ್ಯದರ್ಶಿ ಮರಿಲಿಂಗಯ್ಯ ಮತ್ತು ಎಸ್‌ಡಿಎ ರಾಣಿ ಎಚ್ ಆರ್ ಕೆಲಸ ಮಾಡುತ್ತಿದ್ದರು. ಈ ವೇಳೆ 1,174 ಇ-ಖಾತಾಗಳಲ್ಲಿ ಕೇವಲ 766 ಮಾತ್ರ ಲಭ್ಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com