ಸಂಚು ರೂಪಿಸಿ ಸುಹಾಸ್ ಶೆಟ್ಟಿ ಮರ್ಡರ್: 11 ಮಂದಿ ವಿರುದ್ಧ NIA ಆರೋಪಪಟ್ಟಿ ಸಲ್ಲಿಕೆ

ಸಮಾಜದಲ್ಲಿ ಭಯ ಹುಟ್ಟಿಸಲು ಮತ್ತು ಭಯೋತ್ಪಾದನೆಯನ್ನು ಹರಡಲು ಗುರಿಯಿಟ್ಟು ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
Suhas Shetty
ಸುಹಾಸ್ ಶೆಟ್ಟಿ
Updated on

ಬೆಂಗಳೂರು: ಮಂಗಳೂರು ಮೂಲದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿಸಲಾದ 11 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆರೋಪಪಟ್ಟಿ ಸಲ್ಲಿಸಿದೆ.

11 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಬಜರಂಗದಳದ ಸದಸ್ಯ ಶೆಟ್ಟಿ ಅವರನ್ನು ಈ ವರ್ಷದ ಮೇ 1 ರಂದು ಏಳು ಜನರು ಹತ್ಯೆಗೈದಿದ್ದರು ಎಂದು ಹೇಳಲಾಗುತ್ತಿದೆ.

ಸಮಾಜದಲ್ಲಿ ಭಯ ಹುಟ್ಟಿಸಲು ಮತ್ತು ಭಯೋತ್ಪಾದನೆಯನ್ನು ಹರಡಲು ಗುರಿಯಿಟ್ಟು ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Suhas Shetty
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ರಾಜ್ಯದ 18 ಸ್ಥಳಗಳಲ್ಲಿ NIA ದಾಳಿ

ಗೃಹ ಸಚಿವಾಲಯದ (MHA) ನಿರ್ದೇಶನದ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಸಂಸ್ಥೆ, ಗುರಿಯಿಟ್ಟು ಹತ್ಯೆ ಮಾಡಲಾಗಿದ್ದು, ಇದರ ಹಿಂದೆ ದೊಡ್ಡ ಪಿತೂರಿ ಕಂಡುಬಂದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸುಹಾಸ್ ಶೆಟ್ಟಿ ಅವರ ಚಟುವಟಿಕೆ, ಚಲನವಲನಗಳನ್ನು ಹಲವಾರು ತಿಂಗಳುಗಳ ಕಾಲ ಸೂಕ್ಷ್ಮವಾಗಿ ಹತ್ತೆಹಚ್ಚಿ ಏಳು ಆರೋಪಿಗಳು ಅವರ ಟೊಯೋಟಾ ಇನ್ನೋವಾ ಕಾರನ್ನು ಎರಡು ಕಾರುಗಳಲ್ಲಿ ಹಿಂಬಾಲಿಸಿ ಕೊಂಡು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಅಂದು ಹತ್ಯೆ ಹೇಗಾಯಿತು?

ಆರೋಪಿಗಳು ಸುಹಾಸ್ ಶೆಟ್ಟಿ ಚಲಾಯಿಸುತ್ತಿದ್ದ ಕಾರಿಗೆ ಉದ್ದೇಶಪೂರ್ವಕವಾಗಿ ಅಪಘಾತವನ್ನುಂಟುಮಾಡಿದ್ದಾರೆ, ನಂತರ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಸ್ನೇಹಿತರು ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿದ್ದರು. ಸುಹಾಸ್ ಶೆಟ್ಟಿ ಭಯದಿಂದ ಕಾರು ಬಿಟ್ಟು ಓಡಿಹೋಗಿದ್ದಾರೆ. ಹಲ್ಲೆಕೋರರು ಅವರನ್ನು ಬೆನ್ನಟ್ಟಿ ಕೊಂದು ಹಾಕಿದರು ಎಂದು ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ ತಿಳಿಸಿದೆ.

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಮಾಜಿ ಸದಸ್ಯನಾಗಿರುವ ಆರೋಪಿ ಅಬ್ದುಲ್ ಸಫ್ವಾನ್ ಅಲಿಯಾಸ್ ಕಲವಾರು ಸಫ್ವಾನ್ ಅಲಿಯಾಸ್ ಚೋಪು ಸಫ್ವಾನ್, ನಿಯಾಜ್ ಅಲಿಯಾಸ್ ನಿಯಾ, ಮೊಹಮ್ಮದ್ ಮುಸಮಿರ್ ಅಲಿಯಾಸ್ ಮಹಮ್ಮದ್ ಮುಸಮೀರ್ ಅಲಿಯಾಸ್ ಮೊಹಮ್ಮದ್ ಅಲಿಯಾಸ್ ಮುಜಮ್ಮಿಲಸ್ತ್ ನೊವಾಸ್ ಅಲಿಯಾಸ್ ನೊವಾಸ್‌ಅಲಿಸ್ತ್, ವಮನದ್ ಅಲಿಯಾಸ್ ನೊವಾಸ್‌ಅಲಿಸ್ತ್, ನೌಶಾದ್ ಅಲಿಯಾಸ್ ಚೋಟು ಎಂಬಾತನೊಂದಿಗೆ ಭಯೋತ್ಪಾದನಾ ಸಂಚು ರೂಪಿಸಿದ್ದನು.

ಅಬ್ದುಲ್ ಸಫ್ವಾನ್ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (KFD) ಮತ್ತು ಪಿಎಫ್‌ಐನ ಮಾಜಿ ಸದಸ್ಯನಾಗಿದ್ದಾನೆ. ಆರೋಪಿ ಆದಿಲ್ ಮಹರೂಫ್ ಅಲಿಯಾಸ್ ಆದಿಲ್ ಹಣವನ್ನು ಪಾವತಿಸುವ ಭರವಸೆಯ ಮೇಲೆ ಇತರ ಆರೋಪಿಗಳನ್ನು ನೇಮಿಸಿಕೊಳ್ಳಲು ಹಣವನ್ನು ಒದಗಿಸಿದ್ದ ಎಂದು ಎನ್ಐಎ ಹೇಳಿದೆ.

ಕಲಂದರ್ ಶಫಿ ಅಲಿಯಾಸ್ ಮಂದೆ ಶಫಿ, ಎಂ ನಾಗರಾಜ ಅಲಿಯಾಸ್ ನಾಗ ಅಲಿಯಾಸ್ ಅಪ್ಪು, ರಂಜಿತ್, ಮಹಮ್ಮದ್ ರಿಜ್ವಾನ್ ಅಲಿಯಾಸ್ ರಿಜ್ಜು, ಅಜರುದ್ದೀನ್ ಅಲಿಯಾಸ್ ಅಜರ್ ಅಲಿಯಾಸ್ ಅಜ್ಜು ಮತ್ತು ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ ಸೇರಿದಂತೆ ಐವರು ಆರೋಪಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಬಂಧಿತ ಮತ್ತೊಬ್ಬ ಆರೋಪಿ ಅಬ್ದುಲ್ ರಜಾಕ್ ವಿರುದ್ಧ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com