ತ್ಯಾಜ್ಯ ಸಂಗ್ರಹಣಾ ವಾಹನಗಳ ಕೊರತೆ: ಖಾಲಿ ಜಾಗಗಳಲ್ಲಿ ಕಸ ಸುರಿಯುತ್ತಿರುವ ಹೊರಮಾವು ನಿವಾಸಿಗಳು!

ವಾರ್ಡ್‌ನಲ್ಲಿ 750 ಕ್ಕೂ ಹೆಚ್ಚು ಮನೆಗಳಿವೆ, ಆದರೆ ಮನೆ-ಮನೆ ಕಸ ಸಂಗ್ರಹಣೆಗೆ ಕೇವಲ ಎರಡರಿಂದ ಮೂರು ಆಟೋ-ಟಿಪ್ಪರ್‌ಗಳನ್ನು ಮಾತ್ರ ನಿಯೋಜಿಸಲಾಗಿದೆ. ಪರಿಣಾಮವಾಗಿ, ವಾಹನಗಳು ಒಂದೇ ಸುತ್ತನ್ನು ಪೂರ್ಣಗೊಳಿಸಲು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತವೆ.
File image
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಸದ ವಾಹನಗಳ ಕೊರತೆಯಿಂದಾಗಿ ಸುರಿಯುತ್ತಿರುವ ಕಸ ಸಂಗ್ರಹಿಸಲಾಗುತ್ತಿಲ್ಲ. ಹೀಗಾಗಿ ಹೊರಮಾವು 25ನೇ ವಾರ್ಡ್ ನ ನಿವಾಸಿಗಳು ಖಾಲಿ ಸ್ಥಳಗಲ್ಲಿ ಕಸ ಸುರಿಯುವಂತಾಗಿದೆ.

ನಿವಾಸಿಗಳ ಪ್ರಕಾರ, ವಾರ್ಡ್‌ನಲ್ಲಿ 750 ಕ್ಕೂ ಹೆಚ್ಚು ಮನೆಗಳಿವೆ, ಆದರೆ ಮನೆ-ಮನೆ ಕಸ ಸಂಗ್ರಹಣೆಗೆ ಕೇವಲ ಎರಡರಿಂದ ಮೂರು ಆಟೋ-ಟಿಪ್ಪರ್‌ಗಳನ್ನು ಮಾತ್ರ ನಿಯೋಜಿಸಲಾಗಿದೆ. ಪರಿಣಾಮವಾಗಿ, ವಾಹನಗಳು ಒಂದೇ ಸುತ್ತನ್ನು ಪೂರ್ಣಗೊಳಿಸಲು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತವೆ, ಇದರಿಂದಾಗಿ ಮನೆಗಳ ಕಸ ಸಂಗ್ರಹಿಸಲು ಹಲವು ದಿನಗಳವರೆಗೆ ಕಾಯಬೇಕಾಗುತ್ತದೆ.

ದೀರ್ಘಕಾಲದವರೆಗೆ ಒದ್ದೆಯಾದ ತ್ಯಾಜ್ಯವನ್ನು ಸಂಗ್ರಹಿಸಲು ಸಾಧ್ಯವಾಗದ ಹಲವಾರು ನಿವಾಸಿಗಳು, ಸಮುದಾಯ ಕಸದ ತೊಟ್ಟಿಗಳು ಲಭ್ಯವಿಲ್ಲದ ಕಾರಣ ಖಾಲಿ ಜಾಗಗಳಲ್ಲಿ ಕಸ ಸುರಿಯುತ್ತಿದ್ದಾರೆ. . ನಿವಾಸಿಗಳು ತ್ಯಾಜ್ಯವನ್ನು ನೇರವಾಗಿ ತ್ಯಾಜ್ಯ ಸಂಗ್ರಹಕಾರರಿಗೆ ಹಸ್ತಾಂತರಿಸಲು ಸಾಧ್ಯವಾಗದಿದ್ದಾಗ ತ್ಯಾಜ್ಯವನ್ನು ವಿಲೇವಾರಿ ಮಾಡಲು ಇವು ಪರ್ಯಾಯ ಮಾರ್ಗವಾಗಿವೆ.

ಮಾರ್ಷಲ್‌ಗಳು ಅಥವಾ ಸಿಬ್ಬಂದಿಯ ಸಮಯಪ್ರಜ್ಞೆಯ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ಸಮಸ್ಯೆ ವಾಹನಗಳ ಕೊರತೆ. ಆಟೋ ಹಿಂತಿರುಗುವ ಹೊತ್ತಿಗೆ, ಈಗಾಗಲೇ ಮೂರನೇ ದಿನವಾಗಿದೆ ಮತ್ತು ಜನರು ತಾಳ್ಮೆ ಕಳೆದುಕೊಳ್ಳುತ್ತಾರ ಎಂದು ಸುರೇಶ್ ಬಾಬು ಹೇಳಿದರು.

File image
ಕೆ.ಆರ್ ಮಾರ್ಕೆಟ್ ನಲ್ಲಿ ಸ್ವಚ್ಛತಾ ಅಭಿಯಾನ: ಕಸ ವಿಲೇವಾರಿ, ವ್ಯವಸ್ಥೆಗಳ ಸೂಕ್ತ ನಿರ್ವಹಣೆಗೆ ಆಯುಕ್ತರ ಸೂಚನೆ

ಘನ ತ್ಯಾಜ್ಯ ನಿರ್ವಹಣಾ ತಂಡವು ತನ್ನ ಕೆಲಸವನ್ನು ಮಾಡುತ್ತಿದೆ, ಆದರೆ ಹೆಚ್ಚುವರಿ ವಾಹನಗಳಿಗಾಗಿ ನಿಗಮಕ್ಕೆ ನಾವು ಪದೇ ಪದೇ ಎರಡು ವರ್ಷಗಳಿಂದ ವಿನಂತಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ನೇರವಾಗಿ ತ್ಯಾಜ್ಯವನ್ನು ಹಸ್ತಾಂತರಿಸಲು ಸಾಧ್ಯವಾಗದ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮಲ್ಲಪ್ಪ ಲೇಔಟ್ ನಿವಾಸಿಗಳ ಕಲ್ಯಾಣ ಸಂಘದ ಕಾರ್ಯದರ್ಶಿ ಶ್ರೀಕಾಂತ್ ತಿಳಿಸಿದ್ದಾರೆ.

ಹೊರಮಾವು ಕೆರೆಯ ಬಳಿ ತ್ಯಾಜ್ಯ ಸುರಿಯುತ್ತಿದ್ದಕ್ಕಾಗಿ ಇತ್ತೀಚೆಗೆ ಒಬ್ಬ ನಿವಾಸಿಗೆ ದಂಡ ವಿಧಿಸಲಾಯಿತು. ಡೈಪರ್‌ಗಳನ್ನು ವಿಲೇವಾರಿ ಮಾಡಲು ನಾನು ನಾಲ್ಕು ದಿನಗಳವರೆಗೆ ಕಾಯುತ್ತಿದ್ದೆ. ಸಂಗ್ರಹಣಾ ವಾಹನವು ತುಂಬಾ ಬೇಗನೆ ಹೋಯಿತು. ಹೀಗಾಗಿ ನಾನು ಅದನ್ನು ಹೊರಗೆ ಬಿಸಾಡಬೇಕಾಯಿತು. ಹೀಗಾಗಿ ದಂಡವನ್ನು ಪಾವತಿಸಲು ನನಗೆ ಅಭ್ಯಂತರವಿಲ್ಲ, ಆದರೆ ಯಾರಿಗೆ ದೂರು ನೀಡಬೇಕೆಂದು ನನಗೆ ತಿಳಿದಿಲ್ಲ ಎಂದು ಮತ್ತೊಬ್ಬ ನಿವಾಸಿ ಜಗನ್ನಾಥ್ ಹೇಳಿದರು.

ಇತರ ನಿವಾಸಿಗಳು ಪರಿಷ್ಕೃತ ಸಂಗ್ರಹ ಸಮಯದ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಬೆಳಿಗ್ಗೆ ಕಚೇರಿಗೆ ಹೋಗುವವರು, ತಡವಾಗಿ ಕೆಲಸ ಮಾಡುವ ತಂತ್ರಜ್ಞರು ಮತ್ತು ಮೇಲಿನ ಮಹಡಿಯಲ್ಲಿರುವ ವೃದ್ಧ ನಿವಾಸಿಗಳು ವೇಳಾಪಟ್ಟಿಯನ್ನು ಹೊಂದಿಸಲು ಹೆಣಗಾಡುತ್ತಾರೆ, ಇದರ ಪರಿಣಾಮವಾಗಿ ಕಸದ ಚೀಲಗಳನ್ನು ಖಾಲಿ ಸ್ಥಳಗಳಿಗೆ ಎಸೆಯಲಾಗುತ್ತದೆ ಎಂದರು.

-

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com