ಜಾತಿ ಸಮೀಕ್ಷೆ: ದತ್ತಾಂಶಗಳ ಗೌಪ್ಯತೆ ಮೇಲೆ ಹಸ್ತಕ್ಷೇಪ; ಕೋರ್ಟ್ ನಲ್ಲಿ ಅರ್ಜಿದಾರರ ಆರೋಪ

ನಡೆಯುತ್ತಿರುವ ಸಮೀಕ್ಷೆಯಿಂದ ಗೌಪ್ಯತೆಯ ಹಕ್ಕಿನ ಮೇಲೆ ಹಸ್ತಕ್ಷೇಪ ನಡೆಯುತ್ತಿದೆ ಎಂದು ಅರ್ಜಿದಾರರು ಹೈಕೋರ್ಟ್ ಮುಂದೆ ಹೇಳಿಕೊಂಡಿದೆ, ಆದರೆ ಆಯೋಗವು ಈ ಆರೋಪವನ್ನು ತಿರಸ್ಕರಿಸಿದೆ.
Reprsentational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ನಡೆಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮತ್ತು ತಡೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು.

ರಾಜ್ಯಾದ್ಯಂತ ಸಮೀಕ್ಷೆ ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿದೆ. ನಡೆಯುತ್ತಿರುವ ಸಮೀಕ್ಷೆಯಿಂದ ಗೌಪ್ಯತೆಯ ಹಕ್ಕಿನ ಮೇಲೆ ಹಸ್ತಕ್ಷೇಪ ನಡೆಯುತ್ತಿದೆ ಎಂದು ಅರ್ಜಿದಾರರು ಹೈಕೋರ್ಟ್ ಮುಂದೆ ಹೇಳಿಕೊಂಡಿದೆ, ಆದರೆ ಆಯೋಗವು ಈ ಆರೋಪವನ್ನು ತಿರಸ್ಕರಿಸಿದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿದೆ. ಜನರು ಜಾತಿ, ಧರ್ಮ ಇತ್ಯಾದಿ ವಿವರಗಳನ್ನು ಗಣತಿದಾರರಿಗೆ ಬಹಿರಂಗಪಡಿಸಲು ಯಾವುದೇ ಬಲವಂತವಿಲ್ಲ ಎಂದು ಹೇಳಿದೆ.

ಈ ವಾದಗಳು ಮತ್ತು ಪ್ರತಿವಾದಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠದ ಮುಂದೆ ಮಾಡಲಾಯಿತು, ವಿಚಾರಣೆ ಆಲಿಸಿದ ಪೀಠ ಸಮೀಕ್ಷೆಗೆ ತಡೆ ನೀಡಬೇಕೆಂಬ ಅರ್ಜಿಗಳ ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು. ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಇತರರು ಸಮೀಕ್ಷೆಗೆ ತಡೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು ಮಾಡಿರುವ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಆಧಾರ್ ಕಾರ್ಡ್ ಅನ್ನು ಹೇಗೆ ಬಳಸಲಾಗುವುದು ಎಂಬ ನ್ಯಾಯಾಲಯದ ಪ್ರಶ್ನೆಗೆ, ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲರು ನೀತಿಗಾಗಿ ಡೇಟಾವನ್ನು ಸಂಗ್ರಹಿಸುವಾಗ ಗೌಪ್ಯತೆಯ ಮೇಲೆ ಯಾವುದೇ ಹಸ್ತಕ್ಷೇಪವಿರುವುದಿಲ್ಲ ಎಂದು ಹೇಳಿದರು.

Reprsentational image
ಕರ್ನಾಟಕ ಜಾತಿ ಗಣತಿ: ಕ್ರಿಸ್ತಿಯನ್ ಟ್ಯಾಗ್ ಹೊಂದಿರುವ 14 ಜಾತಿಗಳನ್ನು ಕೈಬಿಟ್ಟ ಆಯೋಗ, ಅವು ಯಾವುವು?

ಅರ್ಜಿದಾರರ ಗುರುತಿಸುವಿಕೆ ಮತ್ತು ಅಡ್ಡ-ಪರಿಶೀಲನೆಗಾಗಿ ಮಾತ್ರ ಆಧಾರ್ ಕಾರ್ಡ್ ಬಳಸುತ್ತಿದ್ದಾರೆ . ಜಾತಿ, ಧರ್ಮ ಇತ್ಯಾದಿಗಳನ್ನು ಬಹಿರಂಗಪಡಿಸಲು ಯಾವುದೇ ಬಲವಂತವಿಲ್ಲ ಎಂದು ಆಯೋಗವನ್ನು ಪ್ರತಿನಿಧಿಸುವ ಹಿರಿಯ ವಕೀಲರು ಹೇಳಿದ್ದಾರೆ. ಇದಕ್ಕೂ ಮೊದಲು, ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲರು ಸಮೀಕ್ಷೆಯನ್ನು ನಡೆಸಲು ರಾಜ್ಯಕ್ಕೆ ಯಾವುದೇ ಶಾಸಕಾಂಗ ಸಾಮರ್ಥ್ಯವಿಲ್ಲ ಎಂದು ತಮ್ಮ ವಾದಗಳನ್ನು ಪುನರುಚ್ಚರಿಸಿದರು.

ಜಾತಿ ದತ್ತಾಂಶವು ಜನಗಣತಿಯ ಭಾಗವಾಗಿದೆ, ಇದನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬಹುದು. 2015 ರಲ್ಲಿ ನಡೆಸಲಾದ ಸಮೀಕ್ಷೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರ ನಮಗೆ ತಿಳಿದಿಲ್ಲ, ಅದನ್ನು ಸ್ವೀಕರಿಸಲಾಗಿದೆಯೋ ಇಲ್ಲವೋ ಎಂಬುದು ತಿಳಿದಿಲ್ಲ, ಆದರೆ ಮತ್ತೆ ಸಮೀಕ್ಷೆಯನ್ನು ನಡೆಸಲಾಗುತ್ತಿದೆ, ಇದಕ್ಕಾಗಿ 420 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ದತ್ತಾಂಶ ಸಂಗ್ರಹಣೆಯು ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅವರು ಹೇಳಿದರು.

2002 ರಲ್ಲಿ ಜಾತಿಗಳ ಸಂಖ್ಯೆ 207, 2015 ರಲ್ಲಿ 1351ಇತ್ತು ಮತ್ತು 2025 ರಲ್ಲಿ ರಲ್ಲಿ ಈ ಸಂಖ್ಯೆ 1,561. ಕ್ಕೆ ಏರಿದೆ ಎಂದು ಅವರು ವಾದಿಸಿದರು. "ದಸರಾ ರಜೆಯ ಸಮಯದಲ್ಲಿ ಜನರಿಗೆ ತೊಂದರೆ ನೀಡಿ ಸಮೀಕ್ಷೆ ನಡೆಸುವಲ್ಲಿ ಆತುರವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಸಮೀಕ್ಷೆಗಾಗಿ ಹೊರಗುತ್ತಿಗೆ ಪಡೆದ ವಿದ್ಯುತ್ ಮೀಟರ್ ರೀಡರ್‌ಗಳನ್ನು ನೇಮಿಸಲಾಗಿದೆ. ಆಧಾರ್ ಕಾಯ್ದೆಯ ಪ್ರಕಾರ ಯಾವುದೇ ಸುರಕ್ಷತೆ ಇಲ್ಲ, ಮತ್ತು ಇಡೀ ಪ್ರಕ್ರಿಯೆಯು ಸೂಕ್ಷ್ಮ ದತ್ತಾಂಶಗಳ ರಕ್ಷಣೆ ಇಲ್ಲದ ಪರಿಸ್ಥಿತಿಗೆ ಕಾರಣವಾಗಬಹುದು. ಇದು ಬದಲಾಯಿಸಲಾಗದ ಪ್ರಕ್ರಿಯೆ. 2015 ರ ವರದಿಯು ಇಂದಿನವರೆಗೆ ಬೆಳಕಿಗೆ ಬಾರದಿರುವಾಗ ಡೇಟಾವನ್ನು ನವೀಕರಿಸುವ ಪ್ರಶ್ನೆ ಎಲ್ಲಿದೆ ಎಂದು ಅವರು ವಾದಿಸಿದರು.

Reprsentational image
Karnataka Survey: ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ನಡುವೆಯೂ ಜಾತಿ 'ಸಮೀಕ್ಷೆ', ಗಣತಿದಾರರ ಪ್ರತಿಭಟನೆ!

ಸಮೀಕ್ಷೆಯು ಜಾತಿ ಜನಗಣತಿಯನ್ನು ತಪ್ಪಾಗಿ ನಿರೂಪಿಸುತ್ತಿದೆ, ಇದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ನಡೆಸಲಾದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಾಗಿದೆ ಎಂದು ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲರು ವಾದಿಸಿದರು.

ಅರ್ಜಿದಾರರು ಸಮೀಕ್ಷೆಗೆ ಅಡ್ಡಿಪಡಿಸುವುದು ಸ್ವಾರ್ಥಪರ ಹಿತಾಸಕ್ತಿ. ರಾಜ್ಯಕ್ಕೆ ಸಮೀಕ್ಷೆ ಮಾಡುವ ಅಧಿಕಾರವಿದೆ. ಆದ್ದರಿಂದ, ಹಾವನೂರ್, ವೆಂಕಟಸ್ವಾಮಿ ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳು 2015 ರ ಸಮೀಕ್ಷೆಗೂ ಮೊದಲು ಇಂತಹ ಸಮೀಕ್ಷೆ ನಡೆಸಿವೆ ಎಂದು ಹಿರಿಯ ವಕೀಲರು ವಾದಿಸಿದರು.

ಕೇಂದ್ರ ಸರ್ಕಾರವು ಅಖಿಲ ಭಾರತ ಆಧಾರದ ಮೇಲೆ ಸಮೀಕ್ಷೆಯನ್ನು ಮಾಡಬಹುದಾದರೆ, ರಾಜ್ಯದ ಮೇಲೆ ಏಕೆ ನಿರ್ಬಂಧವಿದೆ ಎಂದು ಅವರು ಪ್ರಶ್ನಿಸಿದರು. ರಾಜ್ಯಕ್ಕೆ ಅಧಿಕಾರವಿರುವ ಸಮೀಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ. ಅರ್ಜಿದಾರರು ಸಮೀಕ್ಷೆ ನಡೆಸಲು ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸುತ್ತಿಲ್ಲ, ಆದರೆ ಅವರು ದತ್ತಾಂಶ ಸಂಗ್ರಹವನ್ನು ಪ್ರಶ್ನಿಸಿದ್ದಾರೆ ಎಂದು ಅವರು ವಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com