ರಾಮನಗರ ಕರಗ ಉತ್ಸವದಲ್ಲಿ ‘ಡಿ ಬಾಸ್’ ಎಂದು ಕಿರುಚಾಡಿದ ಜನ; 'ಡಿ ಬಾಸ್ ನೇ ಕಟ್ಕೊಂಡು ಹೋಗ್ಲಿ ಅವ್ರು' CM ಡಿ ಕೆ ಶಿವಕುಮಾರ್ ಗರಂ-Video

ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳ ಡಿ ಬಾಸ್ ಘೋಷಣೆ ಜೋರಾಗತೊಡಗಿತು. ಸಿಎಂಗೆ ಮಾತನಾಡಲು ಬಿಡಲಿಲ್ಲ. ಘೋಷಣೆಗಳು ಮುಂದುವರಿದ ಕಾರಣ ಮುಖ್ಯಮಂತ್ರಿ ಕೆಲ ಹೊತ್ತು ಭಾಷಣ ನಿಲ್ಲಿಸಿ ಪರಿಸ್ಥಿತಿಯನ್ನ ಸಮಾಧಾನಗೊಳಿಸಲು ಪ್ರಯತ್ನಿಸಿದರು.
Actor Darshan in Ramanagara Karaga Utsav
ರಾಮನಗರ ಕರಗ ಉತ್ಸವದಲ್ಲಿ ನಟ ದರ್ಶನ್
Updated on

ರಾಮನಗರ: ರಾಮನಗರದ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಷಣ ಆರಂಭಿಸಿದಾಗ ಡಿ ಬಾಸ್ ಡಿ ಬಾಸ್ ಎಂದು ನಟ ದರ್ಶನ್ ಅಭಿಮಾನಿಗಳು ನಿರಂತರವಾಗಿ ಕೂಗಾಡುತ್ತಲೇ ಇದ್ದರು.

ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳ ಡಿ ಬಾಸ್ ಘೋಷಣೆ ಜೋರಾಗತೊಡಗಿತು. ಸಿಎಂಗೆ ಮಾತನಾಡಲು ಬಿಡಲಿಲ್ಲ. ಘೋಷಣೆಗಳು ಮುಂದುವರಿದ ಕಾರಣ ಮುಖ್ಯಮಂತ್ರಿ ಕೆಲ ಹೊತ್ತು ಭಾಷಣ ನಿಲ್ಲಿಸಿ ಪರಿಸ್ಥಿತಿಯನ್ನ ಸಮಾಧಾನಗೊಳಿಸಲು ಪ್ರಯತ್ನಿಸಿದರು.

ನಮಸ್ಕಾರ, ಆಯ್ತು ನಿಮ್ಮ ಭಾವನೆ ನನಗೆ ಅರ್ಥವಾಗಿದೆ, ಡಿ ಬಾಸ್ ಬಗ್ಗೆ ಮಾತನಾಡುತ್ತಿದ್ದೀರಿ, ಅಂತಹ ವಿಷಯಗಳನ್ನು ಸಾರ್ವಜನಿಕವಾಗಿ ಮಾತನಾಡುವುದಕ್ಕೆ ಆಗುವುದಿಲ್ಲ. ತಾಳ್ಮೆಯಿಂದ ಇರಿ ಎಂದು ಸಿಎಂ ಜನತೆಗೆ ಮನವಿ ಮಾಡಿಕೊಂಡರು.

Actor Darshan in Ramanagara Karaga Utsav
ವದಂತಿಗಳಿಗೆ ತೆರೆ: ಜೈಲಲ್ಲಿ ನಟ ದರ್ಶನ್ ಭೇಟಿಯಾದ ಧನ್ವೀರ್

ʻದಚ್ಚುʼ ಫ್ಯಾನ್ಸ್‌ಗೆ ಸಿಎಂ ಕಿವಿಮಾತು

ನಿರಂತರವಾಗಿ ʻಡಿ ಬಾಸ್‌, ಡಿಬಾಸ್‌ʼ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಸಿಎಂ ಕಿವಿಮಾತನ್ನೂ ಹೇಳಿದರು. ಇದು ಪವಿತ್ರವಾದ ಸಭೆ, ನಿಮ್ಮ ಅಭಿಮಾನಕ್ಕೆ ಗೌರವ ಕೊಡ್ತೀನಿ. ಆದ್ರೆ ನೀವು ಕೋರ್ಟ್‌ ವಿಚಾರವನ್ನ ತಂದು ನನ್ನ ಮೇಲೆ ಒತ್ತಡ ಹೇರಬೇಡಿ. ನಿಮ್ಮ ಭಾವನೆ ನನಗೆ ಗೊತ್ತಿದೆ. ನಾನಿಲ್ಲಿ ನಿಮ್ಮ ಸೇವಕನಾಗಿ ಬಂದಿದ್ದೇನೆ. ನಾನು ಸಿಎಂ ಆಗಿರಬಹುದು, ಆದ್ರೆ ರಾಮನಗರ ಜಿಲ್ಲೆಯ ಮಗ, ಈ ನಿಮ್ಮ ಮಗನನ್ನು ಕಾಪಾಡಿಕೊಳ್ಳುವ ಕೆಲಸವನ್ನ ನೀವು ಮಾಡಬೇಕು ಎಂದರು.

ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು, ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ, ನೀವು ದೇವರಲ್ಲಿ ಪ್ರಾರ್ಥನೆ ಮಾಡಿ. ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ನಾನು ಈ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಹೇಳಿದ್ದೆ. ನೀವು ಕೂಡ ಚಾಮುಂಡಿಗೆ ಪ್ರಾರ್ಥನೆ ಮಾಡಿ, ತಾಯಿ ಒಳ್ಳಯದು ಮಾಡ್ತಾಳೆ ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಹಲವು ಬಾರಿ ಕುರ್ಚಿಯಿಂದ ಎದ್ದು ಮತ್ತೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ವೇದಿಕೆಯಲ್ಲಿದ್ದವರು ಅಭಿಮಾನಿಗಳನ್ನ ಶಾಂತಗೊಳಿಸಲು ಮನವಿ ಮಾಡಿದರು. ಈ ವೇಳೆ ಅಭಿಮಾನಿಗಳು ನಿರಂತರವಾಗಿ ʻಡಿ ಬಾಸ್ʼ ಜೈಕಾರ ಕೂಗುತ್ತಲೇ ಇದ್ದರು. ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಲಾಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮುಖ್ಯಮಂತ್ರಿಗಳು ತಮ್ಮ ಭಾಷಣ ಮುಂದುವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com