

ಈ ದೇಶ ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ ಎಂದು ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರು ಈ ದೇಶ ಹಿಂದೂ ರಾಷ್ಟ್ರವಾಗಬೇಕೆ ಅಥವಾ ಆಗಬಾರದೆ ಎಂಬ ಚರ್ಚೆ ನಡೆಯುತ್ತಿದೆ ಎಂದಾಗ, ಈ ದೇಶ ಹಿಂದೂ ರಾಷ್ಟ್ರವಾದರೆ ಹಿಂದುತ್ವವಾದಿಗಳು ಮನುಸ್ಮೃತವಾದಿಗಳಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ವಾಪಸ್ ತರುತ್ತಾರೆ.
ಅದು ಜನರನ್ನು ಹಿಂದುಳಿದ ವರ್ಗಗಳನ್ನು ಶೋಷಣೆ ಮಾಡುವ ವ್ಯವಸ್ಥೆ, ಆ ರೀತಿ ಶೋಷಣೆಯಾದರೆ ಹಿಂದುಳಿದ, ದಲಿತ ಸಮುದಾಯದವರು ಜಾತಿ ವ್ಯವಸ್ಥೆಯಡಿ ಶೋಷಣೆಗೊಳಗಾಗುತ್ತೇವೆ ಎಂದರು.
ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ಮಾರಕ ಎಂದಿದ್ದರು. ಅದನ್ನೇ ನಾನು ಹೇಳುತ್ತಿರುವುದು ಎಂದರು.