ಈ ದೇಶ ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ,ದೇಶಕ್ಕೆ ಮಾರಕ: ಡಾ ಯತೀಂದ್ರ ಸಿದ್ದರಾಮಯ್ಯ

ಈ ದೇಶ ಹಿಂದೂ ರಾಷ್ಟ್ರವಾದರೆ ಹಿಂದುತ್ವವಾದಿಗಳು ಮನುಸ್ಮೃತವಾದಿಗಳಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ವಾಪಸ್ ತರುತ್ತಾರೆ ಎಂದರು.
Dr Yathindra Siddaramaiah
ಡಾ ಯತೀಂದ್ರ ಸಿದ್ದರಾಮಯ್ಯ
Updated on

ಈ ದೇಶ ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ ಎಂದು ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರು ಈ ದೇಶ ಹಿಂದೂ ರಾಷ್ಟ್ರವಾಗಬೇಕೆ ಅಥವಾ ಆಗಬಾರದೆ ಎಂಬ ಚರ್ಚೆ ನಡೆಯುತ್ತಿದೆ ಎಂದಾಗ, ಈ ದೇಶ ಹಿಂದೂ ರಾಷ್ಟ್ರವಾದರೆ ಹಿಂದುತ್ವವಾದಿಗಳು ಮನುಸ್ಮೃತವಾದಿಗಳಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ವಾಪಸ್ ತರುತ್ತಾರೆ.

Dr Yathindra Siddaramaiah
'ತಂದೆ 14 ಮಂದಿಯ ಹೆಸರನ್ನು ಕೊಟ್ಟಿದ್ದರು, ಅದರಲ್ಲಿ ಹೆಚ್ ಸಿ ಮಹದೇವಪ್ಪನವರದ್ದೂ ಇತ್ತು, ಆದರೂ ಸಚಿವ ಸ್ಥಾನ ಅವರ ಕೈತಪ್ಪಿತು': ಯತೀಂದ್ರ ಸಿದ್ದರಾಮಯ್ಯ

ಅದು ಜನರನ್ನು ಹಿಂದುಳಿದ ವರ್ಗಗಳನ್ನು ಶೋಷಣೆ ಮಾಡುವ ವ್ಯವಸ್ಥೆ, ಆ ರೀತಿ ಶೋಷಣೆಯಾದರೆ ಹಿಂದುಳಿದ, ದಲಿತ ಸಮುದಾಯದವರು ಜಾತಿ ವ್ಯವಸ್ಥೆಯಡಿ ಶೋಷಣೆಗೊಳಗಾಗುತ್ತೇವೆ ಎಂದರು.

ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ಮಾರಕ ಎಂದಿದ್ದರು. ಅದನ್ನೇ ನಾನು ಹೇಳುತ್ತಿರುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com