

ತುಮಕೂರು: ಸೆಪ್ಟಂಬರ್ 1 ರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಲು ಉದ್ದೇಶಿಸಿರುವ ಬಿಜೆಪಿ ವಿರುದ್ದ ಡಿಸಿಎಂ ಜಿ ಪರಮೇಶ್ವರ್ ಹರಿಹಾಯ್ದಿದ್ದಾರೆ.
ರಾಜ್ಯ ಸರಕಾರದ ಹಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸೆ.1ರಿಂದ ಲಿಂಗಸುಗೂರಿನಿಂದ ಬಿಜೆಪಿ ಪಾದಯಾತ್ರೆ ನಡೆಸಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿಗ ಅವರು , ವಿರೋಧ ಪಕ್ಷವು ಪಾದಯಾತ್ರೆ ಕೈಗೊಳ್ಳಲು ಸ್ವತಂತ್ರವಾಗಿದೆ.
ಆದರೆ ವಿಧಾನಸಭೆಯಲ್ಲಿ ಸರ್ಕಾರದ ವೈಫಲ್ಯದ ಆರೋಪಗಳನ್ನು ಪ್ರಶ್ನೆ ಎತ್ತಬೇಕು, ಅದನ್ನು ಬಿಟ್ಟು ಬೀದಿಯಲ್ಲಿ ಮಾಡಿದರೆ ಏನು ಮಾಡೋಕಾಗುತ್ತೆ ಎಂದರು. ಅವರು ಪಾದಯಾತ್ರೆ ಮಾಡಲಿ ಆದರೆ ಯಾವ ವೈಫಲ್ಯ? ಎಂಬುದನ್ನು ಅವರು ವಿಧಾನಸಭೆಯಲ್ಲಿ ಹೇಳಬೇಕು.
ಅವರು ಮಾಡಲಿ. ನಾವು ಅವರಿಗೆ ಅದನ್ನು ಮಾಡಬೇಡಿ ಎಂದು ಹೇಳಿದ್ದೇವೆಯೇ? ಅವರು ಸ್ವತಃ ನಿರ್ಧರಿಸಿದ್ದಾರೆ ಅವರು ಅದನ್ನು ಮಾಡಲಿ ಬಿಡಿ. ಸರಿಯಾಗಿ ಅರ್ಥಮಾಡಿಕೊಳ್ಳದೆ, ಅವರು ಜನರಿಗೆ ಮಂಕು ಬೂದಿ ಎರಚಬಾರದು ಎಂದು ಪರಮೇಶ್ವರ್ ಕಿಡಿ ಕಾರಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಪಾದಯಾತ್ರೆ ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 10 ರಂದು ಮುಕ್ತಾಯಗೊಳ್ಳಲಿದೆ ಎಂದು ಘೋಷಿಸಿದ ನಂತರ ಉಪಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.