ಬೆಂಗಳೂರು ಉತ್ತರ: ನೀರಿನ ಮಾಲಿನ್ಯ ಪರಿಶೀಲಿಸಲು ರೋಬೋಟಿಕ್ ತನಿಖೆ ಪ್ರಾರಂಭಿಸಿದ BWSSB

ಇಡೀ ಪ್ರದೇಶವನ್ನು ಅಗೆಯದೆ ದೋಷ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ನಾವು ಲಭ್ಯವಿರುವ ಪ್ರತಿಯೊಂದು ತಾಂತ್ರಿಕ ಸಂಪನ್ಮೂಲವನ್ನು ಬಳಸುತ್ತಿದ್ದೇವೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದರು.
Representional image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಉತ್ ಲಿಂಗರಾಜಪುರಂ ನಿವಾಸಿಗಳಿಗೆ ಕಲುಷಿತ ನೀರಿನಿಂದಾಗಿ ಒಂದು ವಾರಕ್ಕೂ ಹೆಚ್ಚು ಕಾಲ ಅನಾರೋಗ್ಯ ಮತ್ತು ಫುಡ್ ಪಾಯಿಸನ್ ನಂತಹ ಲಕ್ಷಣಗಳು ಕಂಡುಬಂದಿವೆ ಎಂದು ಹೇಳಲಾದ ನಂತರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಭಾನುವಾರ ನೀರು ಸರಬರಾಜನ್ನು ಸ್ಥಗಿತಗೊಳಿಸಿದೆ. ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ತೀವ್ರ ತನಿಖೆ ಪ್ರಾರಂಭಿಸಿತು.

ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ಲಿಂಗರಾಜಪುರಂನ ಕೆಲವು ಭಾಗಗಳಿಗೆ ಮಾಲಿನ್ಯದ ವರದಿಗಳ ನಂತರ ನೀರು ಸರಬರಾಜು ನಿಲ್ಲಿಸಲಾಯಿತು. ಮಾಲಿನ್ಯದ ಮೂಲವನ್ನು ನಿಖರತೆ ಮತ್ತು ಶೀಘ್ರವಾಗಿ ಗುರುತಿಸಲು, ಮಂಡಳಿಯು ಸಿಬ್ಬಂದಿಯೊಂದಿಗೆ ಸುಧಾರಿತ ರೋಬೋಟ್‌ಗಳನ್ನು ಬಳಸಿಕೊಂಡು ತನಿಖೆಯನ್ನು ಪ್ರಾರಂಭಿಸಿದೆ.

ಇಡೀ ಪ್ರದೇಶವನ್ನು ಅಗೆಯದೆ ದೋಷ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ನಾವು ಲಭ್ಯವಿರುವ ಪ್ರತಿಯೊಂದು ತಾಂತ್ರಿಕ ಸಂಪನ್ಮೂಲವನ್ನು ಬಳಸುತ್ತಿದ್ದೇವೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದರು.

ಸಮಸ್ಯೆಯನ್ನು ಪ್ರಮುಖ ಆದ್ಯತೆ ಎಂದು ಪರಿಗಣಿಸಿ, ಬಿಡಬ್ಲ್ಯೂಎಸ್ಎಸ್ಬಿ ತನ್ನ ಎಂಜಿನಿಯರಿಂಗ್ ತಂಡಗಳಿಗೆ ಸಮಸ್ಯೆಯನ್ನು ಗುರುತಿಸಿ ಸರಿಪಡಿಸಲು ಮತ್ತು ಸೋಮವಾರ ಸಂಜೆಯೊಳಗೆ ಸಾಮಾನ್ಯ ನೀರು ಸರಬರಾಜನ್ನು ಪುನಃಸ್ಥಾಪಿಸಲು ನಿರ್ದೇಶಿಸಿದೆ ಎಂದು ಮನೋಹರ್ ಹೇಳಿದರು. ನಿವಾಸಿಗಳಿಗೆ ಅನಾನುಕೂಲತೆಯನ್ನು ತಪ್ಪಿಸಲು, ಮಂಡಳಿಯು 'ಸಂಚಾರಿ ಕಾವೇರಿ' ಮೊಬೈಲ್ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, ಮನೆಗಳಿಗೆ ಉಚಿತವಾಗಿ ಕುಡಿಯುವ ನೀರನ್ನು ಪೂರೈಸಲು ಮತ್ತು ದುರಸ್ತಿ ಅವಧಿಯಲ್ಲಿ ನೀರಿನ ಕೊರತೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.

Representional image
ಇಂದೋರ್ ಕಲುಷಿತ ನೀರು ಪ್ರಕರಣ: ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ, ಮೇಯರ್, ಸ್ಥಳೀಯರಿಂದ ಗೊಂದಲಕಾರಿ ಹೇಳಿಕೆ!

ಯಾವುದೇ 'ಸಾಂಕ್ರಾಮಿಕ ರೋಗ' ಕಂಡುಬಂದಿಲ್ಲ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ; ಆದಾಗ್ಯೂ, ಜ್ವರ ಮತ್ತು ಆಹಾರ ವಿಷದಂತಹ ಲಕ್ಷಣಗಳು ವರದಿಯಾಗಿವೆ. ನೀರು ಸರಬರಾಜು ಸ್ಥಗಿತಗೊಂಡ ನಂತರ, ಮಾಲಿನ್ಯದ ಪರಿಣಾಮವನ್ನು ನಿರ್ಣಯಿಸಲು ಆರೋಗ್ಯ ಅಧಿಕಾರಿಗಳು ಸೋಮವಾರ ಈ ಪ್ರದೇಶದಲ್ಲಿ ಆರೋಗ್ಯ ಸಮೀಕ್ಷೆ ನಡೆಸಲಿದ್ದಾರೆ. ತಪಾಸಣೆ ಮತ್ತು ದುರಸ್ತಿ ಕಾರ್ಯದ ಸಮಯದಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ಪೈಪ್ ನೀರು ಸರಬರಾಜು ಸಂಪೂರ್ಣವಾಗಿ ಪುನಃಸ್ಥಾಪನೆಯಾಗುವವರೆಗೆ ಟ್ಯಾಂಕರ್ ಸೇವೆಗಳನ್ನು ಬಳಸಿಕೊಳ್ಳಲು ನಿವಾಸಿಗಳನ್ನು ಕೋರಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com