ಬೆಂಗಳೂರು: ಸೀಗೆಹಳ್ಳಿ ಸರ್ಕಾರಿ ಶಾಲೆಯ ಹಲವು ವರ್ಷಗಳ ನೀರಿನ ಸಮಸ್ಯೆಗೆ ಸಿಕ್ತು ಪರಿಹಾರ!

ಈ ಶಾಲೆಯನ್ನು 1946 ರಲ್ಲಿ ಪ್ರಾರಂಭಿಸಲಾಯಿತು, ಶಾಲೆಯಲ್ಲಿ ಎರಡು ನೀರು ಸಂಗ್ರಹಣಾ ಟ್ಯಾಂಕ್‌ಗಳಿವೆ. ಅಂತರ್ಜಲ ಕುಸಿತದಿಂದಾಗಿ ಇದ್ದ ಒಂದು ಬೋರ್ ವೆಲ್ ನೀರು ಇಂಗಿ ಹೋಗಿದೆ .
Seegehalli government school in Bengaluru
ಸೀಗೆಹಳ್ಳಿ ಸರ್ಕಾರಿ ಶಾಲೆPhoto | Express
Updated on

ಬೆಂಗಳೂರು: ಕೆ ಆರ್ ಪುರಂನಲ್ಲಿರುವ ಸೀಗೆಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 360 ವಿದ್ಯಾರ್ಥಿಗಳು ಸುಮಾರು ಐದು ವರ್ಷಗಳಿಂದ ನೀರಿನ ಕೊರತೆಯನ್ನು ಎದುರಿಸುತ್ತಿದ್ದರು.

ಜನವರಿಯಿಂದ ಜೂನ್ ವರೆಗೆ ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯಕ್ಕೆ ನೀರು ಮತ್ತು ಕೈ ತೊಳೆಯಲು ತೀವ್ರ ಕೊರತೆ ಎದುರಾಗುತ್ತಿತ್ತು. ಸೀಗೆಹಳ್ಳಿ ಗ್ರಾಮ ಪಂಚಾಯತ್ ಪ್ರತಿ ವಾರ ನೀರು ಪೂರೈಸುತ್ತಿದ್ದರೂ, 360 ವಿದ್ಯಾರ್ಥಿಗಳಿಗೆ ನೀರು ಸಾಕಾಗುತ್ತಿರಲಿಲ್ಲ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ಒದಗಿಸಿದ ಮಾಹಿತಿಯ ಪ್ರಕಾರ, ಸುಮಾರು 170 ಶಾಲೆಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ ಮತ್ತು ಅವುಗಳಲ್ಲಿ 61 ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆಯಿದೆ. ದಾಖಲೆಗಳಲ್ಲಿರುವುದಕ್ಕಿಂತ ಹೆಚ್ಚಿನ ಸಂಖ್ಯೆ ಇರಬಹುದು ಎಂದು ಹೇಳಿದ್ದರು.

The foundation has also installed two different tanks so that water gets collected and can be used for toilets.
ನೀರನ್ನು ಸಂಗ್ರಹಿಸಿ ಶೌಚಾಲಯಗಳಿಗೆ ಬಳಸಲು ಪ್ರತಿಷ್ಠಾನವು ಎರಡು ವಿಭಿನ್ನ ಟ್ಯಾಂಕ್‌ಗಳನ್ನು ಸಹ ಸ್ಥಾಪಿಸಿದೆ.Photo | Express

ಈ ಶಾಲೆಯನ್ನು 1946 ರಲ್ಲಿ ಪ್ರಾರಂಭಿಸಲಾಯಿತು, ಶಾಲೆಯಲ್ಲಿ ಎರಡು ನೀರು ಸಂಗ್ರಹಣಾ ಟ್ಯಾಂಕ್‌ಗಳಿವೆ. ಅಂತರ್ಜಲ ಕುಸಿತದಿಂದಾಗಿ ಇದ್ದ ಒಂದು ಬೋರ್ ವೆಲ್ ನೀರು ಇಂಗಿ ಹೋಗಿದೆ . ಪಂಚಾಯತ್ ಶಾಲೆಗೆ ನೀರು ಪೂರೈಸುತ್ತದೆ ಆದರೆ ಅದು ನಮಗೆ ಸಾಕಾಗುವುದಿಲ್ಲ. ಇದರ ಜೊತೆಗೆ, ಕಳೆದ ಕೆಲವು ವರ್ಷಗಳಿಂದ, ಇದನ್ನು ಇಂಗ್ಲಿಷ್ ಮಾಧ್ಯಮ ಶಾಲೆಯಾಗಿ ಪರಿವರ್ತಿಸಲಾಗಿದೆ. ಇಲ್ಲಿ ಹತ್ತು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ, ಇದು ಸುತ್ತಮುತ್ತಲಿನ ಹಳ್ಳಿಗಳಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಿದೆ ಎಂದು ಸೀಗೆಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ಸರಸ್ವತಿ ಪಿ ಎನ್ ಹೇಳಿದರು.

Seegehalli government school in Bengaluru
ರಾಜ್ಯದ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಇತ್ತೀಚೆಗೆ, ಆಹಾವಾಹನ್ ಫೌಂಡೇಶನ್ ಮತ್ತು ಬಿಎಚ್‌ಎನ್ ಟೆಕ್ನಾಲಜೀಸ್ ಶಾಲೆ ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಕೇಳಿದಾಗ, ನಾವು ತೀವ್ರ ನೀರಿನ ಕೊರತೆಯ ಬಗ್ಗೆ ಪ್ರಸ್ತಾಪಿಸಿದ್ದೇವೆ. ಶಾಲೆಯ ಮೂಲಸೌಕರ್ಯವನ್ನು ಅಧ್ಯಯನ ಮಾಡಿದ ನಂತರ, ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.

ನಮ್ಮ ಶಾಲೆಯಲ್ಲಿ ಈಗಾಗಲೇ ಒಂದು ಪರ್ಕೋಲೇಷನ್ ಟ್ಯಾಂಕ್ ಇತ್ತು, ಅದು ಸರಿಯಾದ ಸ್ಥಿತಿಯಲ್ಲಿರಲಿಲ್ಲ. ಹೊಸದಾಗಿ ಸ್ಥಾಪಿಸಲಾದ ಮಳೆ ನೀರು ಕೊಯ್ಲು ವ್ಯವಸ್ಥೆಯ ಅಡಿಯಲ್ಲಿ, ಮಳೆನೀರು ನೇರವಾಗಿ ಇಲ್ಲಿ ಸಂಗ್ರಹವಾಗುತ್ತದೆ ಹಾಗೂ ಅಂತರ್ಜಲವನ್ನು ಪುನಃ ತುಂಬಿಸುತ್ತದೆ.

ಅದೇ ಸಮಯದಲ್ಲಿ, ನೀರನ್ನು 40,000 ರಿಂದ 50,000 ಲೀಟರ್ ನೀರನ್ನು ಒದಗಿಸುವ ಫಿಲ್ಟರ್ ಮಾಡಲಾದ ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಈ ವ್ಯವಸ್ಥೆಯು ನೀರಿನ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡಿದೆ ಮಾತ್ರವಲ್ಲದೆ ವಿದ್ಯಾರ್ಥಿಗಳು ನೀರಿನ ಸಂರಕ್ಷಣೆಯನ್ನು ಕಾರ್ಯರೂಪದಲ್ಲಿ ವೀಕ್ಷಿಸಲು ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

ಮಳೆ ನೀರು ಕೊಯ್ಲು ವ್ಯವಸ್ಥೆ
ಮಳೆ ನೀರು ಕೊಯ್ಲು ವ್ಯವಸ್ಥೆPhoto | Express

ಬೇಸಿಗೆ ಮತ್ತು ಶುಷ್ಕ ಋತುಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ತಡೆಯಲು ಮಳೆ ನೀರು ಕೊಯ್ಲು ವ್ಯವಸ್ಥೆಯ ಜೊತೆಗೆ, ಪ್ರತಿಷ್ಠಾನವು ಎರಡು ವಿಭಿನ್ನ ಟ್ಯಾಂಕ್‌ಗಳನ್ನು ಸ್ಥಾಪಿಸಿದೆ, ಇದರಿಂದ ನೀರು ಸಂಗ್ರಹವಾಗಲಿದ್ದು ಶೌಚಾಲಯಗಳಿಗೆ ಬಳಸಬಹುದು. ನೂರಾರು ವಿದ್ಯಾರ್ಥಿಗಳಿಗೆ 15 ನಲ್ಲಿಗಳೊಂದಿಗೆ ಕೈ ತೊಳೆಯುವ ಸೌಲಭ್ಯಗಳನ್ನು ಸಹ ಸ್ಥಾಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com