ಎಚ್.ಡಿ ಕುಮಾರಸ್ವಾಮಿ ಕೂಡ ನನ್ನಿಂದ ಸಹಾಯ ಪಡೆದಿದ್ದಾರೆ: ಶಾಸಕ ಕದಲೂರು ಉದಯ್

ಯಾರು ಇಲ್ಲಿಗೆ ಬಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಅವರೆಲ್ಲಾ ನನ್ನ ಬಳಿ ಸಹಾಯ ಪಡೆದಿದ್ದಾರೆ. ಬಹಳಷ್ಟು ಜನರಿಗೆ ಈ ವಿಚಾರ ಗೊತ್ತಿಲ್ಲ, ಕೆಲವರು ರಾಜಕೀಯ ಉದ್ದೇಶದಿಂದ ಭಾಷಣ ಮಾಡಿ ಹೋಗುತ್ತಾರೆ
HD kumaraswamy And kadaluru uday
ಹೆಚ್ ಡಿ ಕುಮಾರಸ್ವಾಮಿ, ಶಾಸಕ ಕದಲೂರು ಉದಯ್(ಸಂಗ್ರಹ ಚಿತ್ರ)

ಮಂಡ್ಯ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನನ್ನ ಬಳಿ ಸಹಾಯ ಪಡೆದಿದ್ದಾರೆ. ಈ ವಿಚಾರದ ಬಗ್ಗೆ ಬೇಕಾದರೇ ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಗೆಜ್ಜಲಗೆರೆಯಲ್ಲಿ ಮಾತನಾಡಿದ ಕದಲೂರು ಉದಯ್, ಕೇಂದ್ರ ಸಚಿವ ಹೆಚ್ ಡಿಕೆ ನನ್ನ ಬಳಿ ಸಹಾಯ ಪಡೆದಿದ್ದಾರೆ. ನನ್ನ ಬಳಿ ಸಾಕಷ್ಟು ನಾಯಕರು ಸಹಾಯ ಪಡೆದಿದ್ದಾರೆ. ಹೆಚ್ ಡಿಕೆ ಸೇರಿ ಅನೇಕರು ಸಹಾಯ ಪಡೆದಿದ್ದಾರೆ. ಈ ವಿಚಾರದ ಬಗ್ಗೆ ಬೇಕಾದರೇ ಬಹಿರಂಗ ಚರ್ಚೆಗೆ ಬರಲಿ ಎಂದರು.

ಯಾರು ಇಲ್ಲಿಗೆ ಬಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಅವರೆಲ್ಲಾ ನನ್ನ ಬಳಿ ಸಹಾಯ ಪಡೆದಿದ್ದಾರೆ. ಬಹಳಷ್ಟು ಜನರಿಗೆ ಈ ವಿಚಾರ ಗೊತ್ತಿಲ್ಲ, ಕೆಲವರು ರಾಜಕೀಯ ಉದ್ದೇಶದಿಂದ ಭಾಷಣ ಮಾಡಿ ಹೋಗುತ್ತಾರೆ. ಅದು ಅಷ್ಟಕ್ಕೆ ಸೀಮಿತ ಆಗಿರುತ್ತದೆ. ನಾನು ಹಿಂದೆಯೇ ಪ್ರತಿಭಟನಾ ಸ್ಥಳಕ್ಕೆ ಬರಬೇಕು ಅಂದುಕೊಂಡಿದ್ದೆ.

ಇಲ್ಲಿಗೆ ಬಂದವರು ನನ್ನನ್ನು ಬೇರೆ ರೀತಿಯಾಗಿ ಬಿಂಬಿಸಿದರು. ಹೀಗಾಗಿ ನನ್ನ ಮನಸ್ಸಿಗೆ ಬೇಸರ ಆಯಿತು ಹೀಗಾಗಿ ಬರಲಿಲ್ಲ ಎಂದರು. ನನ್ನನ್ನು ಬೇರೆ ತರ ಬಿಂಬಿಸಿದ ಮೇಲೆ ನಾನು ಇಲ್ಲಿ ಬಂದು ಮಾತನಾಡಿದರೆಏ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

HD kumaraswamy And kadaluru uday
Watch | ಮಹಿಳಾ ರೌಡಿ ಶೀಟರ್ ಗೆ ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲೈಂಗಿಕ ಕಿರುಕುಳ; KSOU ಆವರಣದಲ್ಲಿ ದೀನದಯಾಳ್ ಉಪಾಧ್ಯಾಯ ತತ್ವಶಾಸ್ತ್ರದ ಕುರಿತಾದ ಸಮ್ಮೇಳನ ರದ್ದು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com