

ಬೆಂಗಳೂರು: ಮಾಡೋಕೆ ಕೆಲಸ ಇಲ್ಲದವ್ನು ಅದೇನೋ ಕೆತ್ತಿದ್ನಂತೆ ಹಾಗ್ಯಾಕೆ ನೀವು ಮಾಡ್ತಿದ್ದೀರಿ ಎಂದು ಬಿಜೆಪಿ ನಾಯಕ ಸಿಟಿ ರವಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.
ಅನುಮತಿ ಪಡೆದೇ ಆರ್ಎಸ್ಎಸ್ ಪಥ ಸಂಚಲನ ಮಾಡಬೇಕು ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಜನ ಗೃಹ ಸಚಿವರನ್ನು ಮರೆಯಬಾರದು ಎಂದು ಆರ್ಎಸ್ಎಸ್ ವಿಚಾರ ಮಾತಾಡ್ತಿದ್ದಾರೆ ಪ್ರಿಯಾಂಕ್ ಖರ್ಗೆ.
ತಮ್ಮ ಇರುವಿಕೆಯನ್ನು ಜನರಿಗೆ ನೆನಪಿಸಲು ಈಥರ ಪದೇ ಪದೆ ಮಾತಾಡ್ತಿದ್ದಾರೆ. ಆರ್ಎಸ್ಎಸ್ ಎಲ್ಲದಕ್ಕೂ ಅನುಮತಿ ಪಡೆದೇ ಪಥಸಂಚಲನ ಮಾಡೋದು. ಗೃಹ ಸಚಿವರಿಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಆ ಕಡೆ ಗಮನ ಹರಿಸಲಿ ಎಂದು ತಿರುಗೇಟು ನೀಡಿದರು.
ಹಿಂದೂ ಪರ ಕಾರ್ಯಕರ್ತ ತೇಜಸ್ ಗೌಡ ಗೃಹ ಸಚಿವರ ವಿರುದ್ಧ ಕೇಸ್ ಹಾಕಿದ್ದು, ಅಷ್ಟಕ್ಕೇ ಗೃಹ ಸಚಿವರು ಆತನ ಮನೆಗೆ ಕೆಲವರನ್ನು ಕಳಿಸಿ ಕೇಸ್ ವಾಪಸ್ ಪಡೆಯಲು ಬೆದರಿಕೆ ಹಾಕಿದ್ದಾರೆ. ನಿಮಗ್ಯಾಕೆ ಭಯ?. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆ ಯಾಕೆ ಹಾಕ್ತೀರಿ?. ಬೆದರಿಕೆಗೆಲ್ಲ ಹೆದರೋದಿಲ್ಲ, ಅದು ಶೋಭೆಯೂ ತರಲ್ಲ ಎಂದು ವಾಗ್ದಾಳಿ ನಡೆಸಿದರು.