'ಜನರ ಮುಂದೆ ಉತ್ತರಿಸಬೇಕಾದ ಸಂದರ್ಭ ಬಂದಾಗಲೆಲ್ಲಾ ಪ್ರಧಾನಿ ಮೋದಿ ಫಾರಿನ್ ಟೂರ್ ಹೋಗ್ಬಿಡ್ತಾರೆ': ಪ್ರಿಯಾಂಕ್ ಖರ್ಗೆ-Video

ಪ್ರಧಾನಮಂತ್ರಿಯವರು ಮತ್ತೊಮ್ಮೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸಾರ್ವಜನಿಕರ ಮುಂದೆ ಉತ್ತರಿಸಬೇಕಾದ ಪ್ರಶ್ನೆಗಳು ಎದುರಾದಾಗಲೆಲ್ಲ ಅವರು ವಿದೇಶಕ್ಕೆ ಹೋಗುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಆರ್‌ಎಸ್‌ಎಸ್‌, ವಿಹೆಚ್ ಪಿ ಮತ್ತು ಟ್ರಸ್ಟ್‌ನವರು ಮಾಡಿರುವ ಆರೋಪಿತ ದೇಣಿಗೆ ದುರ್ಬಳಕೆಗೆ ಕಾಂಗ್ರೆಸ್ ಪಕ್ಷ ಏಕೆ ಉತ್ತರ ನೀಡಬೇಕು? ಇದಕ್ಕೆ ಹೊಣೆ ಯಾರು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪಿನ ಶ್ರೇಯಸ್ಸು ಬಿಜೆಪಿಯವರೇ ಪಡೆದಿದ್ದಾರೆ. ಶಿಲಾನ್ಯಾಸದ ಶ್ರೇಯಸ್ಸು ಅವರೇ ಪಡೆದಿದ್ದಾರೆ. ಧ್ವಜಾರೋಹಣದ ಶ್ರೇಯಸ್ಸು ಪಡೆದಿದ್ದಾರೆ. ಪ್ರಾಣ ಪ್ರತಿಷ್ಠೆಯ ಶ್ರೇಯಸ್ಸು ಕೂಡ ಅವರಿಗೇ ಹೋಗಿದೆ. ಉದ್ಘಾಟನೆಯ ಶ್ರೇಯಸ್ಸನ್ನೂ ಬಿಜೆಪಿಯವರೇ ಪಡೆದಿದ್ದಾರೆ. ಹೀಗಿರುವಾಗ ಆರೋಪಿತ ದೇಣಿಗೆ ದುರ್ಬಳಕೆಯ ಹೊಣೆಯನ್ನೂ ಅವರೇ ಹೊರಬೇಕಲ್ಲವೇ ಎಂದು ಕೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಗೆ 'ನೇಷನ್ ಫಸ್ಟ್' ಅಲ್ಲ, 'ಡೊನೇಷನ್ ಫಸ್ಟ್'. ಈ ಹಣ ಎಲ್ಲಿಗೆ ಹೋಗಿದೆ? ಟ್ರಸ್ಟ್‌ನವರು ಏಕೆ ರಾಜೀನಾಮೆ ನೀಡಿದ್ದಾರೆ? ಅವರು ರಾಜೀನಾಮೆ ನೀಡಿದ್ದಾರೆ ಅಂದ ಮೇಲೆ ಈ ಪ್ರಶ್ನೆಗಳಿಗೆ ಅವರು ಉತ್ತರ ನೀಡಲೇಬೇಕಲ್ಲವೇ ಎಂದು ಕೇಳಿದರು.

ಪ್ರಧಾನಮಂತ್ರಿಯವರು ಮತ್ತೊಮ್ಮೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸಾರ್ವಜನಿಕರ ಮುಂದೆ ಉತ್ತರಿಸಬೇಕಾದ ಪ್ರಶ್ನೆಗಳು ಎದುರಾದಾಗಲೆಲ್ಲ ಅವರು ವಿದೇಶಕ್ಕೆ ಹೋಗುತ್ತಾರೆ ಎಂದು ಟೀಕಿಸಿದರು.

ಎನ್‌ಡಿಎ ನಾಯಕರ ಚುನಾವಣಾ ಆಯೋಗದ ದೂರು

ನಮ್ಮ ಪ್ರಾದೇಶಿಕ ಆಯುಕ್ತರ ಮೂಲಕ ನಾವು ಅಧಿಕೃತವಾಗಿ ನಮ್ಮ ಸಲಹೆಗಳನ್ನು ಸಲ್ಲಿಸಿದ್ದೇವೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಿಜೆಪಿ ಅಥವಾ ಜೆಡಿಎಸ್ ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೆ ಚುನಾವಣಾ ಆಯೋಗ ತಕ್ಷಣ ಸ್ಪಂದಿಸುತ್ತದೆ. ಅದೇ ನಮ್ಮ ಸರ್ಕಾರ ನೀಡಿದ ಸಲಹೆಗಳ ವಿಷಯಕ್ಕೆ ಬಂದರೆ ಯಾವುದೇ ಸ್ಪಂದನೆ ಇಲ್ಲ. ಇದರಿಂದ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈಗ ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.

ಇದು ಅವರ ನಿಗದಿತ ಕಾರ್ಯವಿಧಾನ (standard operating procedure). ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ಪ್ರಕ್ರಿಯೆ ಆರಂಭವಾದಾಗ ಬಿಜೆಪಿ ಪ್ರತಿಭಟನೆ ನಡೆಸಿತ್ತು ಎಂದು ನಾನು ಹಿಂದೆಯೇ ಹೇಳಿದ್ದೆ. ಅಲ್ಲಿನ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳು (BLO) ಮಮತಾ ಬ್ಯಾನರ್ಜಿ ಅವರ ಪ್ರಭಾವದಲ್ಲಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ನಂತರ 'ಲಾಜಿಕಲ್ ಡಿಸ್ಕ್ರೆಪೆನ್ಸಿ' ಎಂಬ ನಿಯಮವನ್ನು ತಂದು ಅನೇಕರನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ಇದೆಲ್ಲವೂ ಅವರ ನಿಗದಿತ ಕಾರ್ಯವಿಧಾನದ ಭಾಗ. ಒಬ್ಬರು ತಮ್ಮ ಪಾತ್ರ ನಿರ್ವಹಿಸುತ್ತಾರೆ, ಮತ್ತೊಬ್ಬರು ತಮ್ಮ ಪಾತ್ರ ನಿರ್ವಹಿಸುತ್ತಾರೆ. ಹೀಗೆ ಈ ಪ್ರಕ್ರಿಯೆ ನಡೆಯುತ್ತದೆ ಎಂದರು.

Priyank Kharge
ರಾಮ ಮಂದಿರ BJP-RSSಗೆ ಎಂದಿಗೂ ಭಕ್ತಿಯ ಸಂಕೇತವಾಗಿರಲಿಲ್ಲ; ಅಧಿಕಾರ ಮತ್ತು ಹಣ ಗಳಿಸುವ ಸಾಧನವಾಗಿತ್ತು: ಪ್ರಿಯಾಂಕ್ ಖರ್ಗೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com