

ಬೆಂಗಳೂರು: ಡಿಕೆ ಶಿವಕುಮಾರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ, ದೇವೇಗೌಡರು ಹೊಟ್ಟೆ ಉರಿಗೆ ಮಾತಾಡೋದು ಬೇಡ ಎಂದು ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರ ಬಗ್ಗೆ ಅಪಾರ ಗೌರವ ಇದೆ. ಇಳಿ ವಯಸ್ಸಿನಲ್ಲಿ ಒಳ್ಳೆ ಮಾರ್ಗದರ್ಶನ ಕೊಡಲಿ. ಅಶೋಕ್ಗೆ ದೇವೇಗೌಡರು ಮಾರ್ಗದರ್ಶನ ನೀಡಲಿ. ಅದು ಬಿಟ್ಟು ಅಸೂಯೆ ಬೀಳಬೇಡಿ. ಪ್ರತಿಭಟನೆ ಮಾಡಿ ಮತ್ತಷ್ಟು ಗೊಂದಲ ಮಾಡಬೇಡಿ ಎಂದು ತಿಳಿಸಿದರು.
ಎಸ್ಎಂ ಕೃಷ್ಣ ಸಿಎಂ ಆಗಿದ್ದು ನಿಮಗೆ ಇಷ್ಟ ಆಗಿಲ್ಲ. ಎರಡನೇ ಬಾರಿ ಧರ್ಮಸಿಂಗ್ ಅವರನ್ನ ಸಿಎಂ ಮಾಡಿದ್ರಿ. ಇವತ್ತು ಡಿಕೆಶಿ ಸಿಎಂ ಆಗಿರೋದು ಸಹಿಸೋಕೆ ಆಗ್ತಿಲ್ಲ. ಜನರು ಮಾತಾಡೋದನ್ನ ಅಶೋಕ್, ಕುಮಾರಸ್ವಾಮಿ ನೋಡಬೇಕು.
ಕುಮಾರಸ್ವಾಮಿ, ಅಶೋಕ್ ಭ್ರಮೆಯಲ್ಲಿ ಇದ್ದಾರೆ. ದೇವೇಗೌಡರಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ದೇವೇಗೌಡರ ಸಲಹೆ ಕೊಡಲಿ, ಫಾರ್ಮುಲ ಕೊಡಲಿ. ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಿ ಸಲಹೆ ಕೊಡಲಿ. ಬಿಡದಿ ವಿಚಾರದಲ್ಲಿ ಸಿಎಂ ಬೇಕಾದ್ರೆ ಸಲಹೆ ಪಡೆಯುತ್ತಾರೆ ಎಂದು ದೇವೇಗೌಡರಿಗೆ ತಿರುಗೇಟು ಕೊಟ್ಟರು.
ಕುಮಾರಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬನ್ನಿ ಅಂತಾರೆ. ಕುಸ್ತಿ ಆಡೋಕೆ ಹೋಗಬೇಕಾ? ರೈತರ ಸಮಸ್ಯೆ ಇತ್ಯರ್ಥ ಮಾಡೋಕೆ ವಿಧಾನಸೌಧ ಇದೆ. ಕೆಂಗಲ್ ಹನುಮಂತಯ್ಯ ಕಟ್ಟಿರೋದು. ಹರಿಯಾಣ, ಪಂಜಾಬ್ನಲ್ಲಿ ಅನೇಕ ದಿನ ರೈತರು ಪ್ರತಿಭಟನೆ ಮಾಡಿದ್ರು.
ಯಾಕೆ ದೇವೇಗೌಡ ಹೋಗಿಲ್ಲ? ಕುಮಾರಸ್ವಾಮಿಗೆ ಮಾತುಕತೆಗೆ ಕರೆದರೆ ವಿಧಾನಸೌಧಕ್ಕೆ ಬರಲ್ಲ ಅಂತಾರೆ. ಪಾಪ ಕುಮಾರಸ್ವಾಮಿ, ಅಶೋಕ್ಗೆ ನೋವಾಗಿದೆ ಎಂದು ಲೇವಡಿ ಮಾಡಿದರು.
ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವ ಇದೆ. ಸತ್ಯಾಗ್ರಹ ಮಾಡ್ತೀನಿ ಅಂತಾರೆ. ನೀಟ್ ಲೋಪ ಆದಾಗ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು ದೇವೇಗೌಡ ಮಾತೇ ಆಡಲಿಲ್ಲ. ಇವತ್ತು ಡಿಕೆ ಶಿವಕುಮಾರ್ ವಿರುದ್ದ ಹೋರಾಟ ಮಾಡ್ತಾರಂತೆ. ದೇವನಹಳ್ಳಿಯಲ್ಲಿ ರೈತರು ಪ್ರತಿಭಟನೆ ಮಾಡಿದಾಗ ದೇವೇಗೌಡರು ಅಲ್ಲಿಗೆ ಹೋಗಿರಲಿಲ್ಲ ಎಂದು ಪ್ರಶ್ನೆ ಮಾಡಿದರು.