

ಬಿಜೆಪಿಯಲ್ಲಿ ದಲಿತರು ಆರ್ ಎಸ್ ಎಸ್ ಗೆ ಗುಲಾಮರು, ದಲಿತರು ಯಾಕೆ ಆರ್ ಎಸ್ ಎಸ್ ಬಗ್ಗೆ ಪ್ರಶ್ನೆ ಮಾಡಬಾರದು, ದಲಿತರು ಈ ಸಮಾಜದ, ಸಂವಿಧಾನದ ಭಾಗವಲ್ಲವೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬೆಂಗಳೂರಿನಲ್ಲಿಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆಗೆ ಆಕ್ರೋಶದಿಂದ ಪ್ರತಿಕ್ರಿಯಿಸಿ,ನಾನು ಯಾವುದನ್ನು ಪ್ರಶ್ನೆ ಮಾಡಬೇಕು, ಪ್ರಶ್ನೆ ಮಾಡಬಾರದು ಎಂದು ಹೇಳುವುದಕ್ಕೆ ಅವರು ಯಾರು, ನನಗೆ ವೈಯಕ್ತಿಕ ಅಧಿಕಾರವಿದೆ. ಕರ್ನಾಟಕದ ಗೃಹ ಸಚಿವರಾಗಿ ನಾನು ಏನು ಕೇಳುತ್ತಿದ್ದೇನೆ ಎಂಬುದು ನನಗೆ ಸ್ಪಷ್ಟವಾಗಿದೆ ಎಂದರು.
ಇಷ್ಟು ದೊಡ್ಡ ಸಂಘಟನೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದ ಮೇಲೆ ಅದರ ಕಾರ್ಯಚಟುವಿಕೆಗಳ ಬಗ್ಗೆ ಸರ್ಕಾರಕ್ಕೆ ವಿವರ ನೀಡಬೇಕಾದದ್ದು ಅಗತ್ಯ. ನಾನು ಯಾರಿಗೂ ಕ್ಯಾರೇ ಮಾಡಲ್ಲ, ನಾನು ದಲಿತನಾಗಲಿ, ಏನೇ ಆಗಲಿ ಮೋಹನ್ ಭಾಗವತ್ ಅವರಷ್ಟೇ ಅಧಿಕಾರ ಹೊಂದಿದ್ದೇನೆ ಎಂದರು.
ಗೃಹ ಸಚಿವನಾಗಿ ನಾನು ಮೋಹನ್ ಭಾಗವತ್ ಅವರನ್ನು ಪ್ರಶ್ನೆ ಮಾಡಿದ್ದೇನೆ, ಅವರು ನನಗೆ ಉತ್ತರ ಕೊಡಲಿ, ಬೇರೆಯವರು ಏಕೆ ಮಾತನಾಡಬೇಕು, ಅದು ಬಿಟ್ಟು ಸಂಪಾದಕತ್ವ ಬರೆಯುವುದು, ಸೋಷಿಯಲ್ ಮೀಡಿಯಾದಲ್ಲಿ ಹೇಳುವುದು ಏಕೆ, ಅಧಿಕೃತವಾಗಿ ಲೆಟರ್ ಹೆಡ್ ನಲ್ಲಿ ಉತ್ತರ ಕೊಡಲಿ ಎಂದರು.
Advertisement