1998-2025ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯನೇ ಹೆಚ್ಚು ಸಾಲ ಮಾಡಿದ್ದಾರೆ: ಆರ್.ಅಶೋಕ್

ನಿನ್ನೆ ವಿಧಾನಸಭೆಯಲ್ಲಿ ಬಜೆಟ್ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಆರ್ ಅಶೋಕ್, 1998ರಿಂದ 2025ರವರೆಗೆ ಮುಖ್ಯಮಂತ್ರಿಯಾಗಿದ್ದವರಲ್ಲಿ ಸಿದ್ದರಾಮಯ್ಯನವರೇ ಅತಿ ಹೆಚ್ಚು ಸಾಲ ಮಾಡಿರುವವರು ಎಂದು ಆರೋಪಿಸಿದರು.
Leader of the Opposition R Ashoka speaks in the Legislative Assembly on Tuesday.
ವಿಧಾನಸಭೆಯಲ್ಲಿ ಮಂಗಳವಾರ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿದರು.
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026–27ರ ರಾಜ್ಯ ಬಜೆಟ್ ನ್ನು ‘ಕ್ರೆಡಿಟ್ ಕಾರ್ಡ್’ ಬಜೆಟ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಸಾಲಗಳ ಆಕ್ಸಿಜನ್ ಮೇಲೆ ಬದುಕುತ್ತಿರುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.

ನಿನ್ನೆ ವಿಧಾನಸಭೆಯಲ್ಲಿ ಬಜೆಟ್ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಆರ್ ಅಶೋಕ್, 1998ರಿಂದ 2025ರವರೆಗೆ ಮುಖ್ಯಮಂತ್ರಿಯಾಗಿದ್ದವರಲ್ಲಿ ಸಿದ್ದರಾಮಯ್ಯನವರೇ ಅತಿ ಹೆಚ್ಚು ಸಾಲ ಮಾಡಿರುವವರು. ಅವರು 4.36 ಲಕ್ಷ ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು 1.63 ಲಕ್ಷ ಕೋಟಿ ರೂ, ಬಸವರಾಜ ಬೊಮ್ಮಾಯಿ 67,000 ಕೋಟಿ ರೂಪಾಯಿ ಹಾಗೂ ಎಚ್.ಡಿ. ಕುಮಾರಸ್ವಾಮಿ 1.01 ಲಕ್ಷ ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಅಂಕಿಅಂಶ ನೀಡಿದರು.

Leader of the Opposition R Ashoka speaks in the Legislative Assembly on Tuesday.
Karnataka Budget 2026: ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟ ಕಾಂಗ್ರೆಸ್ ಸರ್ಕಾರ; ಬಜೆಟ್ ವಿರುದ್ಧ ಬಿಜೆಪಿ ಪ್ರತಿಭಟನೆ

ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅವರು ಸಾಲಗಳನ್ನು ಆಸ್ತಿಗಳ ಸೃಷ್ಟಿಗೆ ಬಳಸಬೇಕು ಎಂದು ಹೇಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಲ್ಲಿ ನೀವು ಪೂರ್ಣಗೊಳಿಸಿದ ಒಂದು ಅಣೆಕಟ್ಟು ಅಥವಾ ದೊಡ್ಡ ಯೋಜನೆಯನ್ನು ತೋರಿಸಿ. ಈಗಾಗಲೇ ಬಜೆಟ್‌ನಲ್ಲಿ ಮೀಸಲಾದ ಹಣದಲ್ಲಿ ಕೇವಲ 59.43% ಮಾತ್ರ ವೆಚ್ಚವಾಗಿದೆ. ಸುಮಾರು 41% ಹಣ ಇನ್ನೂ ಬಳಸಲಾಗಿಲ್ಲ. ಸರ್ಕಾರ ಏಕೆ ಸಂಪೂರ್ಣ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕದ ಬಾಕಿ ಸಾಲಗಳು 6.65 ಲಕ್ಷ ಕೋಟಿ ರೂಪಾಯಿಗೆ ತಲುಪಿವೆ ಎಂದು ಹೇಳಿದ ಅಶೋಕ್, 2026–27ರ ಹಣಕಾಸು ವರ್ಷದ ಹಣಕಾಸು ಕೊರತೆ 1.16 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) 2.95% ಆಗಿದೆ. ರಾಜ್ಯದ ಸಾಲ-ಜಿಎಸ್‌ಡಿಪಿ ಅನುಪಾತವು 25% ಗಡಿ ದಾಟಿದೆ. ವಿಶೇಷವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಒದಗಿಸಲು ಸರ್ಕಾರ ಸಾಲಗಳ ಮೇಲೆ ಅವಲಂಬಿತವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪ್ರತಿವರ್ಷ ರಾಜ್ಯವು 82,000 ಕೋಟಿ ರೂಪಾಯಿ ಸಾಲ ಸೇರಿಸಿಕೊಂಡಿದೆ. ಬಡ್ಡಿ ರೂಪದಲ್ಲಿ ಪ್ರತಿ ಗಂಟೆಗೆ 5.2 ಕೋಟಿ ರೂಪಾಯಿ ಪಾವತಿಸಲಾಗುತ್ತಿದೆ ಎಂದು ಹೇಳಿದರು.

Leader of the Opposition R Ashoka speaks in the Legislative Assembly on Tuesday.
'ನನಗೆ ನಂಬಿಕಸ್ಥ ಬೇಕು, ನೀನೇ ಫೈನಾನ್ಸ್ ಖಾತೆ ತೆಗೆದುಕೋ ಎಂದು ದೇವೇಗೌಡರು ನನ್ನನ್ನು ಹಣಕಾಸು ಸಚಿವ ಮಾಡಿದರು': ಸಿಎಂ ಸಿದ್ದರಾಮಯ್ಯ

ಅನುಸೂಚಿತ ಜಾತಿ ಉಪಯೋಜನೆ (SCP) ಮತ್ತು ಅನುಸೂಚಿತ ಪಂಗಡ ಉಪಯೋಜನೆ (TSP) ನಿಧಿಗಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅಶೋಕ್, ಎಸ್‌ಸಿ/ಎಸ್‌ಟಿ ಸಮುದಾಯಗಳ ಹಣವನ್ನು ದೋಚುವುದು ಸಾಮಾಜಿಕ ನ್ಯಾಯವಾಗುವುದಿಲ್ಲ. 1.56 ಲಕ್ಷ ಕೋಟಿ ರೂಪಾಯಿ ಮೀಸಲಾತಿಯಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ವರ್ಗಾಯಿಸಿದ ನಂತರ SCP/TSPಗೆ ಕೇವಲ 30,000 ಕೋಟಿ ರೂಪಾಯಿ ಮಾತ್ರ ಉಳಿದಿವೆ.

ಹುಲಿ ಸಂರಕ್ಷಣೆ (3.12 ಕೋಟಿ), ಐಟಿ ನೀತಿ ( 10.04 ಕೋಟಿ), ಆರೋಗ್ಯ ಸಂಸ್ಥೆಗಳ ಕಟ್ಟಡ ನಿರ್ವಹಣೆ ( 9.37 ಕೋಟಿ), ಆಯುಷ್ ಕಾಲೇಜು (3.7 ಕೋಟಿ) ಮತ್ತು ಸಂಜಯ್ ಗಾಂಧಿ ಆಸ್ಪತ್ರೆ ( 4 ಕೋಟಿ) ಸೇರಿದಂತೆ ಸಂಬಂಧವಿಲ್ಲದ ಯೋಜನೆಗಳಿಗೆ ಹಣ ಬಳಸಲಾಗಿದೆ. ಜನವರಿ ಅಂತ್ಯದವರೆಗೆ SCP/TSPಗೆ 16,699 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 15,391 ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿದೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬಾಕಿ ಬಿಲ್‌ಗಳ ಪಟ್ಟಿಯನ್ನು ಉಲ್ಲೇಖಿಸಿದ ಅಶೋಕ್, ಒಟ್ಟು 75,689 ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದು ಹೇಳಿದರು. ಇದರಲ್ಲಿ ಗುತ್ತಿಗೆದಾರರಿಗೆ 38,000 ಕೋಟಿ ರೂಪಾಯಿ, ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ (ESCOMs)12,500 ಕೋಟಿ ರೂಪಾಯಿ ಮತ್ತು ಸಾರಿಗೆ ನಿಗಮಗಳಿಗೆ 4,250 ಕೋಟಿ ರೂಪಾಯಿ ಸೇರಿದಂತೆ ಅನೇಕ ಬಾಕಿಗಳು ಸೇರಿವೆ.

ಮುಖ್ಯಮಂತ್ರಿ ಹಣಕಾಸು ಶಿಸ್ತು ಇದೆ ಎಂದು ಹೇಳುತ್ತಿದ್ದಾರೆ. ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ ಆದರೆ ಯಾವುದಕ್ಕೂ ಸರಿಯಾಗಿ ಹಣ ಒದಗಿಸಿಲ್ಲ. ಇಲಾಖೆಗಳು ಗ್ಯಾರಂಟಿ ಯೋಜನೆಗಳಿಗೆ ನೀಡಿದ ಹಣವನ್ನೇ ಸಂಪೂರ್ಣವಾಗಿ ಬಳಸಲು ವಿಫಲವಾಗಿವೆ ಎಂದು ಅಶೋಕ್ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com