ಯಾದಗಿರಿ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಜಲಸಮಾಧಿ

ಮೃತ ಮಕ್ಕಳನ್ನು ನಗನೂರಿನ ರಾಜೀವ್ ಬಾಲಪ್ಪ ಅವರ ಮಕ್ಕಳಾದ ಶರತ್(6), ಹನುಮೇಶ್(7), ಮಲ್ಲಪ್ಪ ಬಾಲಪ್ಪ ಅವರ ಪುತ್ರ ಕಿರಣ್​​​(6) ಹಾಗೂ ರಾಜೀವ್ ಅವರ ಸಹೋದರಿ ಗುಬ್ಬಮ್ಮ ಅವರ ಪುತ್ರಿ ಬಸಮ್ಮ(11) ಎಂದು ಗುರುತಿಸಲಾಗಿದೆ.
Four children from same family drown in farm pond in Yadagiri
ಮೃತ ಮಕ್ಕಳು
Updated on

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಜಲಸಮಾಧಿಯಾಗಿರುವ ದಾರುಣ ಘಟನೆ ಭಾನುವಾರ ನಡೆದಿದೆ.

ಮೃತ ಮಕ್ಕಳನ್ನು ನಗನೂರಿನ ರಾಜೀವ್ ಬಾಲಪ್ಪ ಅವರ ಮಕ್ಕಳಾದ ಶರತ್(6), ಹನುಮೇಶ್(7), ಮಲ್ಲಪ್ಪ ಬಾಲಪ್ಪ ಅವರ ಪುತ್ರ ಕಿರಣ್​​​(6) ಹಾಗೂ ರಾಜೀವ್ ಅವರ ಸಹೋದರಿ ಗುಬ್ಬಮ್ಮ ಅವರ ಪುತ್ರಿ ಬಸಮ್ಮ(11) ಎಂದು ಗುರುತಿಸಲಾಗಿದೆ.

ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಒಟ್ಟಾಗಿ ಈಜಲು ಹೋಗಿದ್ದರು ಎನ್ನಲಾಗಿದೆ.

Four children from same family drown in farm pond in Yadagiri
ಬೆಂಗಳೂರು: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಸಾವು!

ರೈತರ ಅನುಕೂಲಕ್ಕಾಗಿ ನಿರ್ಮಿಸಲಾದ ಈ ಕೃಷಿ ಹೊಂಡವು ರಕ್ಷಣಾ ಬೇಲಿ ಇಲ್ಲದೆ ಎಳೆಯ ಕಂದಮ್ಮಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

ಕೃಷಿ ಹೊಂಡದಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳು ಜಲಸಮಾಧಿಯಾಗಿರುವ ವಿಷಯ ತಿಳಿದು ಪೋಷಕರು ಮತ್ತು ಸಂಬಂಧಿಕರಿಗೆ ತೀವ್ರ ಆಘಾತವಾಗಿದೆ. ಮೃತ ಮಕ್ಕಳೆಲ್ಲರೂ ತೀರಾ ಚಿಕ್ಕ ವಯಸ್ಸಿನವರಾಗಿದ್ದ ಕಾರಣ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com