ಪಿಎಂ ಮೋದಿ -ಅಮಿತ್ ಶಾ ಸಂಸ್ಕೃತ ಮಾತನಾಡುತ್ತಾರೆಯೇ? ತ್ರಿಭಾಷಾ ನೀತಿಯ ಬಗ್ಗೆ ಪ್ರಿಯಾಂಕ್ ಖರ್ಗೆ -ಶೋಭಾ ವಾಗ್ವಾದ

ಅತ್ಯಂತ ಹಳೆಯ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಸಂರಕ್ಷಿಸಬೇಕು ಮತ್ತು ಉತ್ತೇಜಿಸಬೇಕು. ಕೇಂದ್ರದ ನಿಧಿಯಲ್ಲಿನ ಅಸಮಾನತೆಯನ್ನು ಅವರು ಬಹಿರಂಗಪಡಿಸಿದರು, ಸಂಸ್ಕೃತಕ್ಕೆ ಗಮನಾರ್ಹ ಬೆಂಬಲ ಸಿಗುತ್ತದೆ ಆದರೆ ಕನ್ನಡಕ್ಕೆ ಕಡಿಮೆ ಬೆಂಬಲ ಸಿಗುತ್ತದೆ.
ಪಿಎಂ ಮೋದಿ -ಅಮಿತ್ ಶಾ ಸಂಸ್ಕೃತ ಮಾತನಾಡುತ್ತಾರೆಯೇ? ತ್ರಿಭಾಷಾ ನೀತಿಯ ಬಗ್ಗೆ ಪ್ರಿಯಾಂಕ್ ಖರ್ಗೆ -ಶೋಭಾ ವಾಗ್ವಾದ
Updated on

ಬೆಂಗಳೂರು: ಕರ್ನಾಟಕ ಸರ್ಕಾರ ದ್ವಿಭಾಷಾ ಸೂತ್ರವನ್ನು ಅವಳವಡಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಭಾಗವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತೃತಿಯ ಭಾಷೆಯ ಹಿಂದಿ ಭಾಷೆಯನ್ನು ಅಂಕ ಪಟ್ಟಿಯಿಂದ ಹೊರಗಿಡಲಾಗಿದೆ.

ಈ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪರಸ್ಪರ ವಾಗ್ದಾಳಿ ಮುಂದುವರಿಸಿದ್ದಾರೆ. ಹಿಂದಿ ಮತ್ತು ತ್ರಿಭಾಷಾ ನೀತಿಯನ್ನು ಅನುಷ್ಠಾನಗೊಳಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕದ ಕಾಂಗ್ರೆಸ್ ನಾಯಕರು ಅನಗತ್ಯ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್, ಬಿಜೆಪಿ ನಾಯಕರು ಹಿಂದಿ ಭಾಷೆ ಅಥವಾ ತ್ರಿಭಾಷಾ ನೀತಿಯ ಅನುಕೂಲಗಳನ್ನು ವಿವರಿಸಲಿ ಎಂದು ಸವಾಲು ಹಾಕಿದರು. ವಿಷಯವನ್ನು ರಚನಾತ್ಮಕವಾಗಿ ಪ್ರಸ್ತಾಪಿಸಿದರೆ ರಾಜ್ಯವು ಚರ್ಚೆಗೆ ಮುಕ್ತವಾಗಿದೆ ಎಂದು ಅವರು ಹೇಳಿದರು.

ಅತ್ಯಂತ ಹಳೆಯ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಸಂರಕ್ಷಿಸಬೇಕು ಮತ್ತು ಉತ್ತೇಜಿಸಬೇಕು. ಕೇಂದ್ರದ ನಿಧಿಯಲ್ಲಿನ ಅಸಮಾನತೆಯನ್ನು ಅವರು ಬಹಿರಂಗಪಡಿಸಿದರು, ಸಂಸ್ಕೃತಕ್ಕೆ ಗಮನಾರ್ಹ ಬೆಂಬಲ ಸಿಗುತ್ತದೆ ಆದರೆ ಕನ್ನಡಕ್ಕೆ ಕಡಿಮೆ ಬೆಂಬಲ ಸಿಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಪಿಎಂ ಮೋದಿ -ಅಮಿತ್ ಶಾ ಸಂಸ್ಕೃತ ಮಾತನಾಡುತ್ತಾರೆಯೇ? ತ್ರಿಭಾಷಾ ನೀತಿಯ ಬಗ್ಗೆ ಪ್ರಿಯಾಂಕ್ ಖರ್ಗೆ -ಶೋಭಾ ವಾಗ್ವಾದ
'ನಾವು ಓದುವಾಗ ಹಿಂದಿ ಭಾಷೆ ಕಡ್ಡಾಯ ಇರಲಿಲ್ಲ, ಪರೀಕ್ಷೆಗೆ ಅದು ಕಡ್ಡಾಯ ಆಗಬಾರದು': ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಎಷ್ಟು ಜನರು ಸಂಸ್ಕೃತ ಮಾತನಾಡುತ್ತಾರೆ? ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಸಂಸ್ಕೃತ ಮಾತನಾಡುತ್ತಾರೆಯೇ? ಕೇಂದ್ರವು ಸಂಸ್ಕೃತಕ್ಕೆ ಹಣಕಾಸು ಒದಗಿಸುತ್ತಿರುವುದು ಆರ್‌ಎಸ್‌ಎಸ್ ನಾಯಕರನ್ನು ಮೆಚ್ಚಿಸಲು. ಕರ್ನಾಟಕದಲ್ಲಿ ಬಿಜೆಪಿ ನಾಯಕರು ಅಮಿತ್ ಶಾ ಅವರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಆದ್ದರಿಂದ ಅವರು ಹಿಂದಿ ಭಾಷೆಯನ್ನು ಬೆಂಬಲಿಸುತ್ತಿದ್ದಾರೆ. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡುವ ಬಗ್ಗೆ ಅಮಿತ್ ಶಾ ಆಸಕ್ತಿ ಹೊಂದಿದ್ದಾರೆ" ಎಂದು ಅವರು ಹೇಳಿದರು.

ಭಾಷಾ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತಾ, ಪ್ರಿಯಾಂಕ್ ತುಳುವಿನಂತಹ ಪ್ರಾದೇಶಿಕ ಭಾಷೆಗಳು ಅಧಿಕೃತ ಮಾನ್ಯತೆಗೆ ಅರ್ಹವಾಗಿವೆ ಮತ್ತು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ಕರ್ನಾಟಕದ ಸಂಸದರು ಸಂಸತ್ತಿನಲ್ಲಿ ಅಂತಹ ವಿಷಯಗಳನ್ನು ಸಮರ್ಪಕವಾಗಿ ಪ್ರಸ್ತಾಪಿಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಹು ಭಾಷೆಗಳನ್ನು ಕಲಿಯುವುದು ಹೇರಿಕೆ ಅಲ್ಲ, ವಿದ್ಯಾರ್ಥಿಗಳು ಹೆಚ್ಚಿನ ಭಾಷೆಗಳನ್ನು ತಿಳಿದುಕೊಳ್ಳುವುದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಪ್ರತಿಪಾದಿಸಿದರು. ಸಂಸತ್ತಿನಲ್ಲಿ ಹಿಂದಿ ಮಾತನಾಡಿದ್ದಕ್ಕಾಗಿ ತಾವು ಟೀಕೆಗಳನ್ನು ಎದುರಿಸಿದ್ದೇವೆ ಆದರೆ ಕನ್ನಡಿಗರು ಇತರ ಭಾಷೆಗಳನ್ನು ಅಪ್ಪಿಕೊಳ್ಳುವುದರ ಜೊತೆಗೆ ತಮ್ಮ ಭಾಷೆಯನ್ನು ಗೌರವಿಸುತ್ತಾರೆ ಎಂದು ಶೋಭಾ ಒತ್ತಿ ಹೇಳಿದರು.

ರಾಜ್ಯ ಸರ್ಕಾರವು ಗೊಂದಲವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು, ಪರೀಕ್ಷೆಯ ಸಮಯದಲ್ಲಿ ಈ ವಿಷಯವನ್ನು ಎತ್ತಲಾಗಿದೆ, ಇದು ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ ಎಂದು ಹೇಳಿದರು. ಸರ್ಕಾರವನ್ನು "ಬೇಜವಾಬ್ದಾರಿ" ಎಂದು ಟೀಕಿಸಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com