ಇದನ್ನು ಕಂಡ ಪಾರ್ವತಿ ತನ್ನ ಪತಿ ಸೇವಿಸಿದ ವಿಷ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿಯುತ್ತಾಳೆ. ಆದರೆ, ಶಿವನು ನಿದ್ರೆಗೆ ಜಾರಿದರೆ ವಿಷವು ಬೇಗನೆ ದೇಹದ ತುಂಬ ಹರಡಬಹುದು ಎಂದು ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಪರಮೇಶ್ವರನ್ನು ಎಚ್ಚರವಿರಿಸುತ್ತಾರೆ. ಹಾಗಾಗಿ ಆ ಪವಿತ್ರ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ.