ಈ ದಾಕ್ಷಾಯಿಣಿ ಹರಿದ್ವಾರದಲ್ಲಿ ಶಿವನನ್ನು ವಿವಾಹವಾಗುತ್ತಾಳೆ. ಅದು ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿ ದಿನವಾಗಿರುತ್ತದೆ. ಹೀಗೆ ದಕ್ಷನು ಒಮ್ಮೆ ದೇವಲೋಕಕ್ಕೆ ಬಂದಾಗ ಬ್ರಹ್ಮ ವಿಷ್ಣು ಗೌರವ ಸೂಚಿಸುತ್ತಾರೆ. ಆದರೆ, ಪರಶಿವನ ಧ್ಯಾನಮಗ್ನನಾಗಿರುತ್ತಾನೆ. ಕುಪಿತನಾದ ದಕ್ಷನು ಭೂಲೋಕಕ್ಕೆ ಬಂದು ಮಹಾಯಾಗವನ್ನು ಮಾಡಲು ನಿರ್ಧರಿಸುತ್ತಾನೆ. ಈ ಯಾಗಕ್ಕೆ ಪರಶಿವನನ್ನು ಹೊರತುಪಡಿಸಿ ಇನ್ನುಳಿದ ದೇವಾನುದೇವತೆಗಳನ್ನು ಯಾಗಕ್ಕೆ ಕರೆಯುತ್ತಾನೆ. ಈ ವಿಷಯ ದಾಕ್ಷಾಯಿಣಿಗೆ ತಿಳಿದು ತಂದೆಯಲ್ಲಿ ನ್ಯಾಯಾ ಕೇಳಲು ಭೂಲೋಕಕ್ಕೆ ಬರುತ್ತಾಳೆ, ಆಗ ದಕ್ಷನು ನಿನ್ನ ಪತಿಯು ಬೋಳೆಶಂಕರ, ಸ್ಮಶಾನವಾಸಿ, ಸದಾ ಕೀಳು ಜಂತುಗಳೊಂದಿಗೆ ವಾಸಿಸುವ ಭಿಕ್ಷುಕ ಎಂಬುದಾಗಿ ಹೀಯಾಳಿಸುತ್ತಾನೆ. ಇದರಿಂದ ಕುಪಿತಳಾದ ದಾಕ್ಷಾಯಿಣಿ ಈ ಯಜ್ಞವನ್ನು ನಾನು ನಾಶಪಡಿಸುವೆ ಎಂದು ಶಪಥಮಾಡಿ ಯಜ್ಞಕುಂಡದಲ್ಲಿ ಧುಮುಖಿ ದಾಕ್ಷಾಯಿಣಿಯು ಮಹಾಸತಿಯಾಗುತ್ತಾಳೆ.