ವಿಲಿಯಂ-ಕೇಟ್ ಬರೆದಿದ್ದ ಪತ್ರ ಬಹಿರಂಗ

ರೇಡಿಯೋ ಜಾಕಿಗಳ ತಮಾಷೆಯ ಕರೆಯಿಂದ...
ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನಾ
ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನಾ

ಲಂಡನ್: ರೇಡಿಯೋ ಜಾಕಿಗಳ ತಮಾಷೆಯ ಕರೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನಾ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಸ್ವತಃ ರಾಜಕುಮಾರ ವಿನಿಯಂ ಅವರೇ ಪತ್ರ ಬರೆದಿದ್ದರು.

ಪ್ರಿನ್ಸ್ ವಿಲಿಯಂ ಹಾಗೂ ಕೇಟ್ ಮಿಡ್ಲ್ ಬರೆದ ಪತ್ರವನ್ನು ಈಗ ಜೆಸಿಂತಾ ಪತಿ ಬೆನ್ ಬರ್ಬೋಝಾ ಬಹಿರಂಗ ಪಡಿಸಿದ್ದಾರೆ.

ಬ್ರಿಟನ್‌ನ ಬಕಿಂಗ್‌ಹ್ಯಾಂ ಅರಮನೆಯಿಂದ ಬಂದ ಪತ್ರದಲ್ಲಿ, ವಿಲಿಯಂ ಹಾಗೂ ಕೇಟ್ ಅವರು ಜೆಸಿಂತಾ ಸಾವಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದರು. ಕೇಟ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ನಮ್ಮನ್ನು ಜೆಸಿಂತಾ ತುಂಬಾ ಚೆನ್ನಾಗಿ ನೋಡಿಕೊಂಡರು. ನಿಮ್ಮೆಲ್ಲರಿಗೂ ಜೆಸಿಂತಾ ಅಗಲಿಕೆಯ ನೋವನ್ನು ತಡೆಯುವ ಶಕ್ತಿ ಸಿಗಲಿ ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com