ಅಮಿರ್ ಖಾನ್ ಸಂಚಾರ ಸುರಕ್ಷೆ ರಾಯಭಾರಿ

ಭಾರತದ ಪ್ರವಾಸೋದ್ಯಮದ 'ಅತಿಥಿ ದೇವೋ ಭವ' ಅಭಿಯಾನದಿಂದ ಜನರಿಗೆ ಹತ್ತಿರವಾಗಿದ್ದ ಬಾಲಿವುಡ್...
ಅಮಿರ್ ಖಾನ್
ಅಮಿರ್ ಖಾನ್

ನವದೆಹಲಿ: ಭಾರತದ ಪ್ರವಾಸೋದ್ಯಮದ 'ಅತಿಥಿ ದೇವೋ ಭವ' ಅಭಿಯಾನದಿಂದ ಜನರಿಗೆ ಹತ್ತಿರವಾಗಿದ್ದ ಬಾಲಿವುಡ್ ನಟ ಅಮಿರ್ ಖಾನ್ ಈಗ ಸಂಚಾರ ಸುರಕ್ಷೆಯ ರಾಯಭಾರಿಯಾಗಲಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ಸಂಚಾರ ಸುರಕ್ಷೆ ಅಭಿಯಾನಕ್ಕೆ ಅಮಿರ್‌ಖಾನ್ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಅಧಿಕೃತವಾಗಿ ಆದೇಶ ಹೊರಬೀಳಬೇಕಿದೆ.

ಈ ಸಂಬಂಧ ಈಗಾಗಲೇ ಅಮಿರ್‌ಖಾನ್ ಅವರು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು, ಅಭಿಯಾನದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ವರ್ಷಕ್ಕೆ ಸುಮಾರು 1.4 ಲಕ್ಷ ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಸಂಚಾರ ವ್ಯವಸ್ಥೆ ಮತ್ತು ಸುರಕ್ಷಿತ ಚಾಲನೆ ಕುರಿತು ಜಾಗೃತಿ ಮೂಡಿಸಲು ಅಮಿರ್‌ಖಾನ್ ಕೇಂದ್ರ ಸಾರಿಗೆ ಇಲಾಖೆಯೊಂದಿಗೆ ಕೈಜೋಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com