ಬೆಂಗಳೂರು: ರಾಜ್ಯ 20 ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳನ್ನು ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ರಾಜ್ಯ ಪತ್ರ ಹೊರಡಿಸಿದೆ.
ಹಿಂದಿನ ಎರಡು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸಂಪುಟದ ನಿರ್ಣಯದಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ರಾಜ್ಯ ಪತ್ರ ಹೊರಡಿಸಿದ್ದಾರೆ. ಆದೇಶದಂತೆ ಪಟ್ಟಣ ಪಂಚಾಯಿತಿಗಳಾದ ಜೇವರ್ಗಿ, ಹುಕ್ಕೇರಿ, ಕುಡಚಿ, ಸದಲಗಾ, ಪಾಂಡವಪುರ, ಅಫಜಲ್ಪುರ, ಚಿಂಚೋಳಿ, ಗುರುಮಿಠಕಲ್. ಹುನಗುಂದ ಹಾಗೂ ಟಿ.ನರಸೀಪುರವನ್ನು ಪುರಸಭೆ ದರ್ಜೆಗೆ ಏರಿಸಲಾಗಿದೆ. ಹಾಗೆಯೇ ಪುರಸಭೆಗಳಾದ ಹೊಸಕೋಟೆ, ಹಿರಿಯೂರು, ಕನಕಪುರ, ಮುಳಬಾಗಿಲು, ಶಿಡ್ಲಘಟ್ಟ, ಮುಧೋಳ, ಅರಸೀಕೆರೆ, ಸಿರಗುಪ್ಪ, ಉಳ್ಳಾಲ ಹಾಗೂ ಸುರಪುರವನ್ನು ನಗರಸಭೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಪುರಸಭೆ ಹಾಗೂ ನಗರಸಭೆಯನ್ನಾಗಿ ಪರಿವರ್ತಿಸಿದ ಬಳಿಕ ಕೆಲ ಗ್ರಾಮಗಳನ್ನು ನಗರ ಪ್ರದೇಶಗಳಿಗೆ ಸೇರಿಸಲಾಗಿದೆ.
Advertisement