ದಾವೂದ್ ಸಂಭಾಷಣೆ ಮಾಹಿತಿ ಲಭ್ಯ

ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ
Updated on

ನವದೆಹಲಿ: ಮೋಸ್ಟ್ ವಾಂಟೆಡ್ ಉಗ್ರ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಹೊಡೆದುರುಳಿಸುವ ಪ್ರಯತ್ನ ಚುರುಕಾಗಿದೆ.

ದಾವೂದ್ ಮತ್ತು ಆತನ ಸಹಚರನ ಸಂಭಾಷಣೆಯನ್ನು ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಛೇದಿಸಿವೆ. ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಛೇದಿಸಿವೆ. ದುಬೈನಲ್ಲಿರುವ ತನ್ನ ಉದ್ಯಮಿ ಸಹಚರನೊಂದಿಗೆ ದಾವೂದ್ ಮಾತನಾಡುತ್ತಿದ್ದಾಗ ಈ ಸಂಭಾಷಣೆಯ ಪ್ರತಿಯನ್ನು ಪಡೆಯುವಲ್ಲಿ ಗುಪ್ತಚರ ಸಂಸ್ಥೆಗಳು ಯಶಸ್ವಿಯಾಗಿವೆ.

ಉಪಗ್ರಹ ನಿಗಾ ವ್ಯವಸ್ಥೆಯಿಂದ ಈ ಛೇದನ ಪ್ರಕ್ರಿಯೆ ನಡೆಸಲಾಗಿದೆ. ಇದು ದಾವೂದ್ ವಿರುದ್ಧ ಸಿಕ್ಕಿದ ಪ್ರಮುಖ ಪುರಾವೆಯಾಗಿದ್ದು, ಆತ ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿರುವುದು ಸ್ಪಷ್ಟವಾಗಿದೆ ಎಂದು ಗುಪ್ತಚರ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಭಾಷಣೆ ವೇಳೆ ದಾವೂದ್ ದುಬೈಯ ರಿಯಲ್ ಎಸ್ಟೇಟ್ ಏಜೆಂಟ್ ಯಾಸಿರ್ ಎಂಬಾತನೊಂದಿಗೂ ಮಾತುಕತೆ ನಡೆಸುತ್ತಿದ್ದ. ಅಷ್ಟೇ ಅಲ್ಲದೆ, ನಾನು ಯಾವ ಪ್ರಧಾನಿಗೂ, ಯಾವ ಕೋರ್ಟ್‌ಗೂ, ಯಾವ ಜಡ್ಜ್‌ಗೂ ಕಮ್ಮಿಯಿಲ್ಲ ಎಂದು ರಾಜಾರೋಷವಾಗಿ ನುಡಿಯುತ್ತಿದ್ದ ಎಂದೂ ಗುಪ್ತಚರ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com