ದಾವೂದ್ ಸಂಭಾಷಣೆ ಮಾಹಿತಿ ಲಭ್ಯ

ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ

ನವದೆಹಲಿ: ಮೋಸ್ಟ್ ವಾಂಟೆಡ್ ಉಗ್ರ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಹೊಡೆದುರುಳಿಸುವ ಪ್ರಯತ್ನ ಚುರುಕಾಗಿದೆ.

ದಾವೂದ್ ಮತ್ತು ಆತನ ಸಹಚರನ ಸಂಭಾಷಣೆಯನ್ನು ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಛೇದಿಸಿವೆ. ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಛೇದಿಸಿವೆ. ದುಬೈನಲ್ಲಿರುವ ತನ್ನ ಉದ್ಯಮಿ ಸಹಚರನೊಂದಿಗೆ ದಾವೂದ್ ಮಾತನಾಡುತ್ತಿದ್ದಾಗ ಈ ಸಂಭಾಷಣೆಯ ಪ್ರತಿಯನ್ನು ಪಡೆಯುವಲ್ಲಿ ಗುಪ್ತಚರ ಸಂಸ್ಥೆಗಳು ಯಶಸ್ವಿಯಾಗಿವೆ.

ಉಪಗ್ರಹ ನಿಗಾ ವ್ಯವಸ್ಥೆಯಿಂದ ಈ ಛೇದನ ಪ್ರಕ್ರಿಯೆ ನಡೆಸಲಾಗಿದೆ. ಇದು ದಾವೂದ್ ವಿರುದ್ಧ ಸಿಕ್ಕಿದ ಪ್ರಮುಖ ಪುರಾವೆಯಾಗಿದ್ದು, ಆತ ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿರುವುದು ಸ್ಪಷ್ಟವಾಗಿದೆ ಎಂದು ಗುಪ್ತಚರ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಭಾಷಣೆ ವೇಳೆ ದಾವೂದ್ ದುಬೈಯ ರಿಯಲ್ ಎಸ್ಟೇಟ್ ಏಜೆಂಟ್ ಯಾಸಿರ್ ಎಂಬಾತನೊಂದಿಗೂ ಮಾತುಕತೆ ನಡೆಸುತ್ತಿದ್ದ. ಅಷ್ಟೇ ಅಲ್ಲದೆ, ನಾನು ಯಾವ ಪ್ರಧಾನಿಗೂ, ಯಾವ ಕೋರ್ಟ್‌ಗೂ, ಯಾವ ಜಡ್ಜ್‌ಗೂ ಕಮ್ಮಿಯಿಲ್ಲ ಎಂದು ರಾಜಾರೋಷವಾಗಿ ನುಡಿಯುತ್ತಿದ್ದ ಎಂದೂ ಗುಪ್ತಚರ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com