ಭದ್ರತಾ ಪಡೆಗೆ ಮಣ್ಣು ಮುಕ್ಕಿಸಿ ಮೋದಿ ನೋಡಲು ಬಂದ ಆಗಂತುಕ

ಪ್ರವೇಶ ಪತ್ರ ಇಲ್ಲದೆಯೇ ವ್ಯಕ್ತಿಯೊಬ್ಬ..
ನರೇಂದ್ರ ಮೋದಿ
ನರೇಂದ್ರ ಮೋದಿ

ಮುಂಬೈ: ಪ್ರವೇಶ ಪತ್ರ ಇಲ್ಲದೆಯೇ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಇದ್ದ ವೇದಿಕೆಯ ಬಳಿ ಆಗಮಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಈ ಘಟನೆ ನಡೆದಿದೆ.

ಸರಿಯಾದ ಪ್ರವೇಶ ಪತ್ರ ಇಲ್ಲದೆಯೇ ಭದ್ರತಾ ಸಿಬ್ಬಂದಿಗಳಿಗೆ ಮಣ್ಣು ಮುಕ್ಕಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿದ್ದ ವೇದಿಕೆ ಬಳಿ ವ್ಯಕ್ತಿಯೊಬ್ಬ ಆಗಮಿಸಿದ್ದನು ಎಂದು ಮೂಲಗಳಿಂದ ತಿಳಿದು ಬಂದಿದೆ.

ಎಂಟ್ರಿ ಪಾಸ್ ಇಲ್ಲದೆಯೇ ಭದ್ರತಾ ಸಿಬ್ಬಂದಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ವ್ಯಕ್ತಿಯನ್ನು ಅನಿಲ್ ಮಿಶ್ರಾ ಎಂದು ಗುರುತಿಸಲಾಗಿದೆ.

ನಾನು ಬಿಜೆಪಿ ಕಾರ್ಯಕರ್ತನೆಂದು ಅನಿಲ್ ಮಿಶ್ರಾ ಹೇಳಿಕೊಳ್ಳುತ್ತಿದ್ದಾನೆ. ಆದರೆ, ಪ್ರವೇಶ ಪತ್ರವಿಲ್ಲದೇ ವೇದಿಕೆ ಬಳಿ ಹೇಗೆ ಆಗಮಿಸಿದ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಕೇಂದ್ರ ಸಚಿವರು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ವೇದಿಕೆ ಮೇಲೆ ಹಾಜರಿದ್ದರು. ಈ ವೇಳೆ ಈ ಅನಿಲ್ ಮಿಶ್ರಾ ಎಂಟ್ರಿ ಪಾಸ್ ಇಲ್ಲದೆಯೇ ವೇದಿಕೆಯ ತನಕ ಆಗಮಿಸಿರುವುದು ಭದ್ರತಾ ವೈಪಲ್ಯವನ್ನು ತೋರಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com