ನವದೆಹಲಿ: ಕೇಂದ್ರದ ಮಾಜಿ ಸಚಿವ, ಕೋಲಾರ ಸಂಸಂದ ಕೆ.ಎಚ್.ಮುನಿಯಪ್ಪ ಹಾಗೂ ತೆಲುಗು ನಟ ಚಿರಂಜೀವಿ ಸೇರಿ ಹಲವರಿಗೆ ಸರ್ಕಾರಿ ಬಂಗ್ಲೆ ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇತ್ತೀಚೆಗಷ್ಟೇ ಸಚಿವ ಸಂಪುಟ ವಿಸ್ತರಿಸಿತ್ತು. ಈ ಹಿನ್ನೆಲೆಯಲ್ಲಿ ನೂತನ ಸಚಿವರಿಗೆ ಬಂಗ್ಲೆಯ ಸಮಸ್ಯೆ ಕಾಡಿದ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಮುನಿಯಪ್ಪ, ಚಿರಂಚೀವಿ, ವಯಲಾರ್ ರವಿ, ರಾಜೀವ್ ಶುಕ್ಲಾ ಮತ್ತು ಅಧೀರ್ ರಂಜನ್ ಚೌದರಿ ಅವರಿಗೆ ನೋಟಿಸ್ ನೀಡಲಾಗಿದೆ.
ಈ ಐವರು ಸಚಿವರು 8ನೇ ಮಾದರಿಯ ಬಂಗ್ಲೆಗಳಲ್ಲಿ ನೆಲೆಸಿದ್ದರು. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಐಧು ತಿಂಗಳಾಗುತ್ತಾ ಬಂದರೂ ಅವರು ಈವರೆಗೆ ಬಂಗ್ಲೆ ತೆರವುಗೊಳಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳಲಾಗಿದೆ.
Advertisement