ಸಂಸತ್ ಅಧಿವೇಶನ ನಾಳೆಗೆ ಮುಂದೂಡಿಕೆ

ವಿಮಾ ಮಸೂದೆ, ಕಪ್ಪು ಹಣ ವಾಪಸ್ ತರುವ ವಿಚಾರ ಸೇರಿದಂತೆ ಹಲವು ವಿಷಯಗಳ ವಿರುದ್ಧ ಧ್ವನಿ...
ಸಂಸತ್ ಅಧಿವೇಶನ ನಾಳೆಗೆ ಮುಂದೂಡಿಕೆ

ನವದೆಹಲಿ: ಸಂತಾಪ ಸೂಚನೆಯ ಬಳಿಕ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಇತ್ತ ವಿರೋಧ ಪಕ್ಷಗಳು ಮುಂದಾಗಿದ್ದು, ವಿಮಾ ಮಸೂದೆ, ಕಪ್ಪು ಹಣ ವಾಪಸ್ ತರುವ ವಿಚಾರ ಸೇರಿದಂತೆ ಹಲವು ವಿಷಯಗಳ ವಿರುದ್ಧ ಧ್ವನಿ ಎಬ್ಬಿಸುವ ಸಾಧ್ಯತೆಗಳಿವೆ.

ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ಡಿಸೆಂಬರ್ 23ನೇ ತಾರೀಖಿನವರೆಗೆ ನಡೆಯಲಿದೆ.

ನೂತವಾಗಿ ರಚನೆಯಾಗಿರುವ ಬಿಜೆಪಿ ಸರ್ಕಾರದ ಮೊದಲ ಚಳಿಗಾಲದ ಅಧಿವೇಶನ ಇದಾಗಿದ್ದು, ಪ್ರಮುಖ ಮಸೂದೆಗಳು ಜಾರಿಗೆ ಬರುವ ಸಾಧ್ಯತೆಗಳಿವೆ.

ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷೆ ಸಭೆಯನ್ನು ಕರೆಸಿ, ಚಳಿಗಾಲದ ಅಧಿವೇಶನ ಸುಗಮವಾಗಿ ನಡೆಸಿಕೊಡಲು ಮನವಿ ಮಾಡಿದ್ದರು.

ಇಂದು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಉಭಯ ಸದನಗಳಲ್ಲಿ ಕಾಂಗ್ರೆಸ್ ನಾಯಕ ಮುರಳಿ ಡೋರ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು.

ಸಂತಾಪ ಸೂಚನೆಯ ಬಳಿಕ ಲೋಕ ಸಭೆಯಲ್ಲಿ ಗೋಪಿನಾಥ್ ಮುಂಡೆ ಅವರ ಪುತ್ರಿ ಪ್ರೀತಮ್ ಮುಂಡೆ ಸೇರಿದಂತೆ ಇತರೆ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.

ಬಳಿಕ ಪ್ರಧಾನಿ ನರೇಂದ್ರ ಮೋದಿ, ನೂತನವಾಗಿ ನೇಮಕಗೊಂಡ ಸಚಿವರನ್ನು ಪರಿಚಯ ಮಾಡಿಸಿದರು. ಈ ಬಳಿಕ ಲೋಕ ಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಇತ್ತ ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಮೂಲಕ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ವ್ಯಕ್ತಪಡಿಸಲಾಯಿತು. ಕಾಂಗ್ರೆಸ್ ನಾಯಕ ಮುರಳಿ ಡೋರಾ, ಪ್ರಸಿದ್ದ ಯೋಗಾ ಪಟು ಬಿಕೆಎಸ್ ಅಯ್ಯಂಗಾರ್, ಮಾಜಿ ರಾಜ್ಯ ಸಭಾ ಸದಸ್ಯರಾದ ಲೇಖ್‌ರಾಜ್ ಬಚನಿ, ಜಗದೇವ್ ಸಿಂಗ್ ತಲ್ವಾಂದಿ ಮತ್ತು ಎಸ್‌ಎಸ್ ರಾಜೇಂದ್ರನ್ ಸೇರಿದಂತೆ ಹಲವು ರಂಗದ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು.

ಸಂತಾಪ ಸೂಚನೆಯ ಬಳಿಕ ರಾಜ್ಯ ಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com