ಸಂಸತ್ತಿನ ಒಂದು ದೃಶ್ಯ
ಸಂಸತ್ತಿನ ಒಂದು ದೃಶ್ಯ

ಲೋಕಸಭೆಯಲ್ಲಿ ಕಪ್ಪುಹಣದ ಬಗ್ಗೆ ಚರ್ಚೆ

ಚಳಿಗಾಲ ಅಧಿವೇಶನದ ಮೊದಲ ದಿನ ಕಪ್ಪು ಹಣವನ್ನು ಚರ್ಚಿಸಲು ವಿರೋಧ ಪಕ್ಷಗಳು ನಡೆಸಿದ ಗದ್ದಲದಿಂದ ...
Published on

ನವದೆಹಲಿ: ಚಳಿಗಾಲ ಅಧಿವೇಶನದ ಮೊದಲ ದಿನ ಕಪ್ಪು ಹಣವನ್ನು ಚರ್ಚಿಸಲು ವಿರೋಧ ಪಕ್ಷಗಳು ನಡೆಸಿದ ಗದ್ದಲದಿಂದ ಯಾವುದೇ ಕಲಾಪಗಳು ನಡೆಯದೆ, ಇಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಕಾಂಗ್ರೆಸ್ ನ ಹಲವು ನಾಯಕರು ಕಪ್ಪು ಹಣದ ವಿಷಯದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಅವರ ಭಾಷಣದ ಕೆಲವು ಮುಖ್ಯಾಂಶಗಳು:
* ಚುನಾವಣೆಗೂ ಮುಂಚೆ, ದೇಶದ ಬಜೆಟ್ ನ ಸುಮಾರು ಐದರಷ್ಟು ಮೊತ್ತದ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುತ್ತೇವೆ ಎಂದಿದ್ದರು ಮೋದಿ.
* ಸರ್ಕಾರವನ್ನು ಬದಲಾಯಿಸಿದರೆ ಕಪ್ಪು ಹಣ ಮಾಂತ್ರಿಕವಾಗಿ ವಾಪಸ್ ಬರುವುದೆಂದು ದೇಶವನ್ನು ನಂಬಿಸಲಾಗಿತ್ತು.
* ಯುಪಿಎ ಸರ್ಕಾರದ ಹೆಸರು ಹಾಳುಗೆಡವುದಷ್ಟೆ ಬಿಜೆಪಿ ಉದ್ದೇಶವಾಗಿತ್ತು.
* ಕಪ್ಪು ಹಣವನ್ನು ವಾಪಸ್ ತರಲು ಯುಪಿಎ ಸರ್ಕಾರವೇ ಕಾರ್ಯಪ್ರವೃತ್ತಿಯಾಗಿತ್ತು.
* ಸರ್ಕಾರಕ್ಕೆ ಈಗ ಸಿಕ್ಕಿರುವ ಮಾಹಿತಿಯನ್ನು ಸಂಪೂರ್ಣ ಬಹಿರಂಗಗೊಳಿಸಬೇಕು ಮತ್ತು ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಭಾಷಣದ ಮುಖ್ಯಾಂಶಗಳು
* ಈ ಕೂಡಲೆ ಕಪ್ಪು ಹಣ ಹೊಂದಿರುವವರ ಹೆಸರುಗಳನ್ನು ಬಹಿರಂಗಪಡಿಸಬೇಕು.
* ಸರ್ಕಾರ ೫೦ ಜನರಿದ್ದಾರೆ ಎಂದಿತ್ತು, ಆದರೆ ಅವರ ಹೆಸರುಗಳನ್ನೂ ಹೇಳಲು ಹಿಂಜರಿದಿದೆ.
* ಹಪ್ಪು ಹಣ ವಾಪಸ್ ತರಲು ಸರ್ಕಾರ ಯಾವ ಯಾವ ದೇಶಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಮೋದಿ ತಿಳಿಸಲಿ.
* ನೂರು ದಿನಗಳೊಳಗೆ ಕಪ್ಪು ಹಣ ತರುತ್ತೇವೆ ಎಂದು ವಚನ ಕೊಟ್ಟಿದ್ದ ಸರ್ಕಾರ ಸೋತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com