ಚಂಡೀಗಢ: ಹರಿಯಾಣದಲ್ಲಿ ಬಿ.ಎಸ್.ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾರನ್ನು ಪದೇ ಪದೆ ವರ್ಗ ಮಾಡಲಾಗುತ್ತಿತ್ತು.
ಇದೀಗ ಬಿಜೆಪಿ ಸರ್ಕಾರ ಇದ್ದರೂ ಅವರನ್ನು ಮತ್ತೆ ಎತ್ತಂಗಡಿ ಮಾಡಲಾಗಿದೆ. ನವೆಂಬರ್ ನಲ್ಲಿ ಅವರನ್ನು ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.
ಇದೀಗ ಬುಧವಾರ ರಾತ್ರಿ ಪ್ರಾಚ್ಯ ವಸ್ತುಗಳ ಮತ್ತು ವಸ್ತು ಸಂಗ್ರಹಾಲಯ ಇಲಾಖೆಯ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಖೇಮ್ಕಾಗೆ ಇದು 50ನೇ ವರ್ಗಾವಣೆಯಾಗಿದೆ.
Advertisement