ನವದೆಹಲಿ: ಮಹಾಮಾರಿ ಹೆಚ್1ಎನ್1ಗೆ ಶುಕ್ರವಾರ ಮಹಾರಾಷ್ಟ್ರದಲ್ಲಿ ಆರು ಮಂದಿ ಬಲಿಯಾಗಿದ್ದು, ಮಹಾರಾಷ್ಟ್ರದಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹಂದಿ ಜ್ವರ ದೇಶದಾದ್ಯಂತ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪ್ರಸ್ತುತ ಮಹಾರಾಷ್ಟ್ರ ಒಂದರಲ್ಲಿ 45 ಮಂದಿಗೆ ಸೋಂಕು ತಗುಲಿರುವುದು ದೃಢೀಕರಣವಾಗಿದೆ. ಇದರಂತೆ ಹಂದಿಜ್ವರದ ಪ್ರಕರಣ 4,670ಕ್ಕೆ ಏರಿದೆ.
ಸಾವನ್ನಪ್ಪಿರುವ ಆರು ಮಂದಿ ನಾಗ್ಪುರ, ಔರಂಗಾಬಾದ್, ಅಕೋಲ ಮತ್ತು ಥಾಣೆಗೆ ಸೇರಿದವರಾಗಿದ್ದಾರೆ. ಇದೇ ಪ್ರದೇಶ 45 ಮಂದಿಗೆ ಸೋಂಕುರಿವುದಾಗಿದೆ ಅಲ್ಲಿನ ಸ್ಥಳೀಯ ವೈದ್ಯಾಧಿಕಾರಿಗಳು ದೃಢೀಕರಿಸಿದ್ದು, 216 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಇವರಲ್ಲಿ 34 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
Advertisement