ನವದೆಹಲಿ: ಭೂಕಂಪ ಪೀಡಿತ ನೇಪಾಳದಲ್ಲಿರುವ ರಾಜ್ಯದ ಜನರನ್ನು ರಕ್ಷಿಸಲು ದೆಹಲಿಯ ಕರ್ನಾಟಕ ಭವನದಲ್ಲೂ ಮಾಹಿತಿ ಕೇಂದ್ರ ತೆರೆಯಲಾಗಿದೆ.
ಕರ್ನಾಟಕ ಭವನದ ಜಂಟಿ ಸ್ಥಾನಿಕ ಆಯುಕ್ತ ರಂಗಸ್ವಾಮಿ (09868393991) ಹಾಗೂ ಶಂಭು ಲಿಂಗಪ್ಪ (09868393989) ಅವರನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು.
ರಾಜ್ಯದಿಂದ ನೇಪಾಳಕ್ಕೆ ಹೊರಟಿರುವ ಅಧಿಕಾರಿಗಳು ರಾಜ್ಯದ ಜನರನ್ನು ದೆಹಲಿಗೆ ಕರೆತರಲಿದ್ದಾರೆ. ದೆಹಲಿ ಕರ್ನಾಟಕ ಭವನದಲ್ಲಿ ನೇಪಾಳದಿಂದ ಬರುವ ಜನರಿಗೆ ವಸತಿ ವ್ಯವಸ್ಥೆ ಹಾಗೂ ಊರಿಗೆ ತೆರಳಲು ವ್ಯವಸ್ಥೆ ಮಾಡಲಾಗುತ್ತದೆ.
Advertisement