ನವದೆಹಲಿ: ಪ್ರಬಲ ಭೂಕಂಪಕ್ಕೆ ನಲುಗಿರುವ ನೇಪಾಳದಲ್ಲಿ ಸಿಲುಕಿ ಸಂಕಷ್ಟಕ್ಕೊಳಗಾಗಿರುವ ಭಾರತೀಯರ ಪೈಕಿ ಸುಮಾರು 1050 ಭಾರತೀಯರನ್ನು ರಕ್ಷಿಸಲಾಗಿದೆ.
ನೇಪಾಳದಲ್ಲಿ ಶನಿವಾರ ಸಂಭವಿಸಿದ ಪ್ರಭಲ ಭೂಕಂಪನದಿಂದಾಗಿ ಪ್ರವಾಸ ಹಾಗೂ ಇನ್ನಿತರ ಕೆಲಸದ ಮೇಲೆ ನೇಪಾಳಕ್ಕೆ ತೆರಳಿದ್ದ ಭಾರತೀಯರ ಪೈಕಿ 1050 ಮಂದಿಯನ್ನು ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಿಸಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ವಾಯು ಸೇನೆ ಹರಸಾಹಸ ಪಡುತ್ತಿದೆ. ಒಂದೆಡೆ ಮತ್ತೆ ಮತ್ತೆ ಭೂಕಂಪ ಸಂಭವಿಸುತ್ತಿದೆ. ಮತ್ತೊಂದೆಡೆ ಹವಮಾನ ವೈಪರಿತ್ಯದ ನಡುವೆಯೂ ಭಾರತೀಯ ರಕ್ಷಣಾ ಪಡೆ ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದೆ. ವಾಯುಪಡೆಗೆ ಸೇರಿದ 6 ವಿಮಾನಗಳ ಮೂಲಕ 1050 ಮಂದಿಯನ್ನು ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ.
Advertisement