ಪಶ್ಚಿಮ ಬಂಗಾಳ ಸಾರಿಗೆ ಹಾಗೂ ಕ್ರೀಡಾ ಸಚಿವ ಮದನ್ ಮಿತ್ರಾ
ದೇಶ
ಶಾರದಾ ಹಗರಣ: ಮದನ್ ಮಿತ್ರಾ ಜಾಮೀನು ತಿರಸ್ಕರಿಸಿದ ಕೋಲ್ತತಾ ಹೈ ಕೋರ್ಟ್
ಸಾವಿರಾರು ಕೋಟಿ ಹಗರಣ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಾರಿಗೆ ಹಾಗೂ ಕ್ರೀಡಾ ಸಚಿವ ಮದನ್ ಮಿತ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋಲ್ಕತಾ ಹೈ ಕೋರ್ಟ್ ಗುರುವಾರ ತಿರಸ್ಕರಿಸಿದೆ...
ನವದೆಹಲಿ: ಸಾವಿರಾರು ಕೋಟಿ ಹಗರಣ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಾರಿಗೆ ಹಾಗೂ ಕ್ರೀಡಾ ಸಚಿವ ಮದನ್ ಮಿತ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋಲ್ಕತಾ ಹೈ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಮದನ್ ಮಿತ್ರಾ ಓರ್ವ ಪ್ರಭಾವಿ ವ್ಯಕ್ತಿಯಾಗಿದ್ದು, ಹಗರಣದಲ್ಲಿ ಪಾರಾಗುವ ಸಂಭವವಿದೆ. ಹೀಗಾಗಿ ಮದನ್ ಮಿತ್ರಾ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಬೇಕೆಂದು ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಿಬಿಐ ಅಧಿಕಾರಿಗಳ ಮನವಿಯನ್ನು ಸ್ವೀಕರಿಸಿರುವ ಕೋಲ್ಕತಾ ನ್ಯಾಯಾಲಯವು ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ್ದು, ಮದನ್ ಮಿತ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ಶಾರದಾ ಚಿಟ್ ಫಂಡ್ ಹಗರಣದಲ್ಲಿ ಒಳಸಂಚು, ಅಧಿಕಾರ ದುರುಪಯೋಗ, ಹಣ ಹೂಡಿಕೆ ಮುಂತಾದ ಮೇಲ್ನೋಟ ವಿಚಾರಗಳಿಗೆ ಸಂಬಂಧಿಸಿದಂತೆ ಮದನ್ ಮಿತ್ರಾ ಅವರನ್ನು 2014ರ ಡಿಸೆಂಬರ್ ತಿಂಗಳಲ್ಲಿ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ