ಓಂ ಪ್ರಕಾಶ್ ರಾವತ್ ಹೊಸ ಚುನಾವಣಾ ಆಯುಕ್ತ

ಮಧ್ಯಪ್ರದೇಶ ಕೇಡರ್‍ನ ಐಎಎಸ್ ಅಧಿಕಾರಿಯಾಗಿದ್ದ ಓಂ ಪ್ರಕಾಶ್ ರಾವತ್ ಅವರು ಹೊಸ ಚುನಾವಣಾ ಆಯುಕ್ತರಾಗಿ ನೇಮಕ...
ಓಂ ಪ್ರಕಾಶ್ ರಾವತ್
ಓಂ ಪ್ರಕಾಶ್ ರಾವತ್
Updated on

ನವದೆಹಲಿ: ಮಧ್ಯಪ್ರದೇಶ ಕೇಡರ್‍ನ ಐಎಎಸ್ ಅಧಿಕಾರಿಯಾಗಿದ್ದ ಓಂ ಪ್ರಕಾಶ್ ರಾವತ್ ಅವರು ಹೊಸ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಲು ಬೆರಳೆಣಿಕೆಯ ದಿನ ಬಾಕಿಯಿರುವಾಗಲೇ ಈ ಬೆಳವಣಿಗೆ ನಡೆದಿದೆ. ರಾವತ್‍ರ ನೇಮಕದ ಮೂಲಕ ಚುನಾವಣಾ ಆಯೋಗದಲ್ಲಿ ಖಾಲಿಯಿದ್ದ ಒಂದು ಹುದ್ದೆಯೂ ತುಂಬಿದಂತಾಗಿದೆ.

ಇವರ ಅಧಿಕಾರಾವಧಿ ಡಿಸೆಂಬರ್ 2018ರಲ್ಲಿ ಕೊನೆಗೊಳ್ಳಲಿ ದೆ. ರಾವತ್ ಅವರು ಕೇಂದ್ರ ಭಾರಿ ಕೈಗಾರಿಕೆ ಸಚಿವಾಲಯದ ಪಬ್ಲಿಕ್ ಎಂಟರ್ ಪ್ರೈಸ್ ಇಲಾಖೆ ಕಾರ್ಯದರ್ಶಿಯಾಗಿಯೂ, ರಕ್ಷಣಾ ಸಚಿವಾಲಯದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com