ಪ್ರತಿಭಟನಾ ನಿರತ ಮಹಿಳೆಯರು, ಮಕ್ಕಳ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಮಾಡುವಂತೆಯೇ ಇಲ್ಲೂ ಹಲ್ಲೆ ಮಾಡಲಾಗುತ್ತಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ನಾನೇನು ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಅಹಿಂಸಾ ಮಾರ್ಗದಲ್ಲೇ ಪ್ರತಿಭಟನೆ ಮುಂದುವರೆಸುತ್ತೇವೆ, ಬೇಡಿಎಕ್ ಈಡೇರದೇ ಇದ್ದರೆ ಆಮರಣಾಂತ ಉಪವಾಸ ಕೈಗೊಳ್ಳುತ್ತೇವೆ ಒಬ್ಬ ಪ್ರತಿಭಟನಾ ನಿರತನ ಮೇಲೆ ಹಲ್ಲೆ ನಡೆದರೂ ಪೊಲೀಸರು ಹಾಗೂ ಸರ್ಕಾರವೇ ನೇರ ಕಾರಣವಾಗಲಿದೆ ಎಂದು ಹಾರ್ದಿಕ್ ಎಚ್ಚರಿಸಿದ್ದಾರೆ.