ಜಮ್ಮು: ಜಮ್ಮು-ಕಾಶ್ಮೀರದ ಉದ್ಧಂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾರ ಪ್ರಮಾಣದ ಸ್ಪೋಟಕ ಸಾಮಗ್ರಿಗಳು ಪತ್ತೆಯಾಗಿದ್ದು ಸಿಆರ್ ಪಿಎಫ್ ಸಿಬ್ಬಂದಿ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಪೋಟಕ್ಕೆ ಬಲಸಲಾಗುವ ಟಿ.ಎನ್.ಟಿ ಸ್ಲಾಬ್ ನ್ನು ವಶಪಡಿಸಿಕೊಂಡಿರುವ ಪೊಲೀಸರು, ಹೆದ್ದಾರಿ ತೆರವು ಮಾಡಿದ ಬಳಿಕ ಇದನ್ನು ಹಾಗೇ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರ ಹೆದ್ದಾರಿ ಭೂಕುಸಿತ ಪೀಡಿತ ಪ್ರದೇಶವಾಗಿರುವುದರಿಂದ ತೆರವುಗೊಳಿಸಲು ಟಿಎನ್ ಟಿ ಸ್ಲಾಬ್ ಗಳನ್ನು ಬಳಸುತ್ತಾರೆ.
ಕಾಶ್ಮೀರ ಕಣಿವೆಗೆ ಭಾರತದೊಂದಿಗೆ ಸಂಪರ್ಕ ಕಲ್ಪಿಸಲು ಇರುವ ಒಂದೇ ಮಾರ್ಗ ಜಮ್ಮು-ಶ್ರೀನಗರ ಹೆದ್ದಾರಿಯಾಗಿದೆ, ಈ ಪ್ರದೇಶದಲ್ಲೇ ಸ್ಪೋಟಕ ಪತ್ತೆಯಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Advertisement