ಮಗದೊಬ್ಬರು, ``ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ನೆಟ್ವರ್ಕ್ ಹೆಸರು ನೀಡಿದರೆ, ನಾನೇ ರೀಚಾರ್ಜ್ ಮಾಡುತ್ತೇನೆ'' ಎಂದೂ, ಇನ್ನೊಬ್ಬರು, ``ಉಚಿತವಾಗಿ ಕಾರು, ಬೈಕುಗಳನ್ನು ರಿಪೇರಿ ಮಾಡಿಕೊಡುತ್ತೇನೆ'' ಎಂದು ಟ್ವಿಟರ್ನಲ್ಲಿ ಬರೆದುಕೊಂಡರು. ಎಲ್ಲೆಲ್ಲಿ ಮಳೆ ಪರಿಸ್ಥಿತಿ ಹೇಗಿದೆ, ಎಲ್ಲೆಲ್ಲಿ ಪರಿಹಾರ ಶಿಬಿರಗಳಿವೆ, ಯಾರನ್ನು ಸಂಪರ್ಕಿಸಿದರೆ ಆಶ್ರಯ ದೊರೆಯುತ್ತದೆ. ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸುವುದು ಹೇಗೆ... ಹೀಗೆ ಜನ ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದರು.