ಪತಂಜಲಿ ನೂಡಲ್ಸ್ ನಲ್ಲಿ ಕೀಟಪತ್ತೆ : ಬಾಬಾ ರಾಮ್ ದೇವ್ ಗೆ ಸಂಕಷ್ಟ

ಬಾಬಾ ರಾಮ್ ದೇವ್ ಕನಸಿನ ಕೂಸಾಗಿದ್ದ ಪತಂಜಲಿ ಅಟಾ ನೂಡಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಹರ್ಯಾಣದ ಅಂಗಡಿಯೊಂದರಲ್ಲಿ ಪಂತಂಜಲಿ ನೂಡಲ್ಸ್ ಪಾಕೆಟ್ ...
ಪತಂಜಲಿ ನೂಡಲ್ಸ್
ಪತಂಜಲಿ ನೂಡಲ್ಸ್

ನವದೆಹಲಿ:  ಬಾಬಾ ರಾಮ್ ದೇವ್ ಕನಸಿನ ಕೂಸಾಗಿದ್ದ ಪತಂಜಲಿ ಅಟಾ ನೂಡಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಹರ್ಯಾಣದ ಅಂಗಡಿಯೊಂದರಲ್ಲಿ ಪಂತಂಜಲಿ ನೂಡಲ್ಸ್ ಪಾಕೆಟ್ ಒಳಗೆ ಕೀಟಗಳು ಪತ್ತೆಯಾಗಿವೆ.

ಹರ್ಯಾಣದ ನರ್ವಾನದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಪತಂಜಲಿ ನೂಡಲ್ಸ್ ಪಾಕೆಟ್ ಖರೀದಿಸಿದರು. ನಂತರ ಅದನ್ನು ತೆರೆದಾಗ ಸೀಲ್ ಮಾಡಿದ್ದ ಪಾಕೆಟ್ ನಲ್ಲಿ ಕೆಲವು ಕೀಟಗಳು ಪತ್ತೆಯಾಗಿವೆ ಎಂದು ಆಂಗ್ಲ ವಾಹಿನಿಯೊಂದು ಹೇಳಿದೆ.

ತನ್ನ ಅಂಗಡಿಯಿಂದಲೇ  ಖರೀದಿಸಿದ್ದ ಪತಂಜಲಿ ನೂಡಲ್ಸ್ ಪಾಕೆಟ್ ನಲ್ಲಿ ಕೀಟಗಳು ಪತ್ತೆಯಾಗಿದೆ ಎಂದು ಅಂಗಡಿ ಮಾಲೀಕ ಒಪ್ಪಿಕೊಂಡಿದ್ದಾನೆ.

ಇನ್ನು ನೂಡಲ್ಸ್ ಖರೀದಿಸಿದ್ದ ವ್ಯಕ್ತಿಯೂ ಪತಂಜಲಿ ನೂಡಲ್ಸ್ ವಿರುದ್ಧ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ. ನೆಸ್ಟ್ಲೆ ಕಂಪನಿಯ ಮ್ಯಾಗಿ ನಿಷೇಧವಾದ ನಂತರ ಬಾಬಾ ರಾಮ್ ದೇವ್  ತಮ್ಮ ಪತಂಜಲಿ ನೂಡಲ್ಸ್ ಅನ್ನು ಮಾರುಕಟ್ಟೆಗೆ ತಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com