ದಾದ್ರಿ ಹತ್ಯಾ ಪ್ರಕರಣ: ಮತ್ಯಾವ ತನಿಖೆಯೂ ಬೇಡ ಎಂದ ಇಕ್ಲಾಖ್ ಕುಟುಂಬಸ್ಥರು

ಉತ್ತರ ಪ್ರದೇಶದ ದಾದ್ರಿಯ ಇಕ್ಲಾಖ್ ಸಾವಿನ ಸಂಬಂಧ ಮತ್ತೆ ಯಾವ ತನಿಖೆ ನಡೆಸಬಾರದು ಎಂದು ಮೃತನ ಕುಟುಂಬಸ್ಥರು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ,,,
ಇಕ್ಲಾಖ್ ಕುಟುಂಬಸ್ಥರು
ಇಕ್ಲಾಖ್ ಕುಟುಂಬಸ್ಥರು
Updated on

ಲಕ್ನೋ: ಗೋಮಾಂಸ ಸೇವನೆ ಆರೋಪದ ಮೇಲೆ ಕೊಲ್ಲಲ್ಪಟ್ಟ ಉತ್ತರ ಪ್ರದೇಶದ ದಾದ್ರಿಯ ಇಕ್ಲಾಖ್ ಸಾವಿನ ಸಂಬಂಧ ಮತ್ತೆ ಯಾವ ತನಿಖೆ ನಡೆಸಬಾರದು ಎಂದು ಮೃತನ ಕುಟುಂಬಸ್ಥರು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಮನವಿ ಮಾಡಿದ್ದಾರೆ.

ಘಟನೆ ಸಂಬಂಧ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ತನಿಖೆ ನಡೆಸಿ, ತೆಗೆದುಕೊಂಡಿರುವ  ಕ್ರಮ ತಮಗೆ ತೃಪ್ತಿ ತಂದಿದ್ದು ಮರು ತನಿಖೆ ಬೇಡ ಎಂದು ಮನವಿ ಮಾಡಿದ್ದಾರೆ.

ಸರ್ಕಾರದ ತನಿಖೆ ತಮಗೆ ತೃಪ್ತಿ ನೀಡಿದೆ. ಉತ್ತರ ಪ್ರದೇಶ ಸರ್ಕಾರ ಮೃತ ಕುಟುಂಬಸ್ಥರಿಗೆ 45 ಲಕ್ಷ ಪರಿಹಾರ ನೀಡಿದ್ದು , ಪರಿಹಾರ ಮೊತ್ತವನ್ನು ಮತ್ತಷ್ಟು ಹೆಚ್ಚಿಸುವಂತೆ ಮೃತ ಇಕ್ಲಾಖ್ ಪುತ್ರ ಒತ್ತಾಯಿಸಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com