``ಅಸಹಿಷ್ಣುತೆ ಎನ್ನುವುದು ರಾಜಕೀಯ ವಿಚಾರ. ರಾಜಕಾರಣಿಗಳು ನೀಡುವ ಹಾಗೆ ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿರುವ ನ್ಯಾ.ಠಾಕೂರ್, ``ಎಲ್ಲಿಯವರೆಗೆ ನಮ್ಮಲ್ಲಿ ನ್ಯಾಯ ಪರಿಪಾಲನೆ ಇರುತ್ತದೆಯೋ, ಸ್ವತಂತ್ರ ನ್ಯಾಯಾಂಗ ವಿರುತ್ತದೋ, ನ್ಯಾಯಾಲಯಗಳು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಭಾಯಿಸುತ್ತವೆಯೋ ಅಲ್ಲಿಯವರೆಗೆ ಯಾರೂ ಭಯ ಪಡಬೇಕಾಗಿಲ್ಲ, ಎಲ್ಲ ವರ್ಗಗಳ, ಎಲ್ಲ ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗ ಸಮರ್ಥ ಎಂದಿದ್ದಾರೆ.