ಅಸಹಿಷ್ಣುತೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಭಯಪಡಬೇಕಿಲ್ಲ: ಸಿಜೆಐ ಠಾಕೂರ್

ಎಲ್ಲಿಯವರೆಗೆ ನ್ಯಾಯಾಂಗವು ಸ್ವತಂತ್ರವಾಗಿರುತ್ತದೋ, ಅಲ್ಲಿಯವರೆಗೆ ಜನರ ಹಕ್ಕುಗಳನ್ನು ಯಾರಿಗೂ ಕಸಿದುಕೊಳ್ಳಲು...
ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್
ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್
Updated on
ನವದೆಹಲಿ: ``ಎಲ್ಲಿಯವರೆಗೆ ನ್ಯಾಯಾಂಗವು ಸ್ವತಂತ್ರವಾಗಿರುತ್ತದೋ, ಅಲ್ಲಿಯವರೆಗೆ ಜನರ ಹಕ್ಕುಗಳನ್ನು ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಯಾರೂ ಭಯಪಡಬೇಕಿಲ್ಲ.'' 
ಇದು ದೇಶದ ನೂತನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರ ಮನದಾಳದ ಮಾತು. ದೇಶದೆಲ್ಲೆಡೆ ಅಸಹಿಷ್ಣುತೆಯ ವಿಚಾರ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಜೆಐ ಅವರ ಈ ಮಾತುಗಳು ಮಹತ್ವ ಪಡೆದಿವೆ. 
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಸಿಜೆಐ ಠಾಕೂರ್ ಅವರ ಅಸಹಿಷ್ಣುತೆಗೆ ಸಂಬಂಧಿಸಿದ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದ್ದಾರೆ. 
``ಅಸಹಿಷ್ಣುತೆ ಎನ್ನುವುದು ರಾಜಕೀಯ ವಿಚಾರ. ರಾಜಕಾರಣಿಗಳು ನೀಡುವ ಹಾಗೆ ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿರುವ ನ್ಯಾ.ಠಾಕೂರ್, ``ಎಲ್ಲಿಯವರೆಗೆ ನಮ್ಮಲ್ಲಿ ನ್ಯಾಯ ಪರಿಪಾಲನೆ ಇರುತ್ತದೆಯೋ, ಸ್ವತಂತ್ರ ನ್ಯಾಯಾಂಗ ವಿರುತ್ತದೋ, ನ್ಯಾಯಾಲಯಗಳು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಭಾಯಿಸುತ್ತವೆಯೋ ಅಲ್ಲಿಯವರೆಗೆ ಯಾರೂ ಭಯ ಪಡಬೇಕಾಗಿಲ್ಲ, ಎಲ್ಲ ವರ್ಗಗಳ, ಎಲ್ಲ ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗ ಸಮರ್ಥ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com