ನಿಶ್ಚಿತಾರ್ಥ ನಂತರ ವರದಕ್ಷಿಣೆ ಬೇಡಿಕೆ: ಮದುವೆ ರದ್ದುಗೊಳಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ ವಧು

ನಿಶ್ಚಿತಾರ್ಥದ ನಂತರ ವರನ ಕುಟುಂಬ ವರದಕ್ಷಿಣೆ ಕೇಳಿದ್ದಕ್ಕೆ ಅಸಮಾಧಾನಗೊಂಡ ವಧು, ಮದುವೆಯನ್ನು ರದ್ದುಪಡಿಸಿರುವುದಾಗಿ ಫೇಸ್ ಬುಕ್ ನಲ್ಲಿ ,,,,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೇರಳ: ನಿಶ್ಚಿತಾರ್ಥದ ನಂತರ ವರನ ಕುಟುಂಬ ವರದಕ್ಷಿಣೆ ಕೇಳಿದ್ದಕ್ಕೆ ಅಸಮಾಧಾನಗೊಂಡ ವಧು, ಮದುವೆಯನ್ನು ರದ್ದುಪಡಿಸಿರುವುದಾಗಿ ಫೇಸ್ ಬುಕ್ ನಲ್ಲಿ ಘೋಷಿಸಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೇರಳದ ತ್ರಿಶ್ಶೂರ್ ನಿವಾಸಿ ರಮ್ಯಾ ರಾಮಚಂದ್ರನ್, ನಿಶ್ಚಿತಾರ್ಥದ ಬಳಿಕ ಗಂಡಿನ ಕಡೆಯವರು ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ, ಅದಕ್ಕೆ ತಾನು ಮದುವೆ ರದ್ದುಗೊಳಿಸಿರುವುದಾಗಿ ತನ್ನ ಫೇಸ್ ಬುಕ್ ಫೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ನಿಶ್ಚಿತಾರ್ಥಕ್ಕೂ ಮುನ್ನ ಹಣ, ಚಿನ್ನ ಏನೂ ಬೇಡ ಎಂದು  ಹೇಳಿದ್ದ. ಆದರೆ ನಿಶ್ಚಿತಾರ್ಥವಾದ ಮೇಲೆ 50 ಸೌರನ್ ಚಿನ್ನ, 5 ಲಕ್ಷ ರೂಪಾಯಿ ನಗದು ನೀಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಯುವತಿ ತಿಳಿಸಿರುವುದಾಗಿ, ವರದಕ್ಷಿಣೆ ಸಂಪ್ರದಾಯಕ್ಕೆ ವಿರೋಧಿಯಾಗಿರುವ ತಾನು ಇದನ್ನೂ ವಿರೋಧಿಸಿ ಮದುವೆಯನ್ನು ರದ್ದುಪಡಿಸಿರುವುದಾಗಿ ಫೇಸ್ ಬುಕ್ ನಲ್ಲಿ ರಮ್ಯಾ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com