ಅಷ್ಟೇ ಅಲ್ಲ, ಸಂಸತ್ನ ವ್ಯಾಪ್ತಿಯನ್ನು ಅತಿಕ್ರಮಿಸಿದ ನ್ಯಾಯಾಂಗಕ್ಕೆ 'ಕಠಿಣ ಸಂದೇಶ' ರವಾನಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಸೋಮವಾರ ಲೋಕಸಭೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ(ವೇತನ ಮತ್ತು ಸ್ಥಿತಿಗತಿ) ಸೇವಾ ತಿದ್ದುಪಡಿ ವಿಧೇಯಕ 2015ರ ಬಗೆಗಿನ ಚರ್ಚೆಯ ವೇಳೆ ಸದಸ್ಯರು ಎನ್ಜೆಎಸಿ ಕುರಿತು ಚರ್ಚೆ ಶುರುವಿಟ್ಟು ಕೊಂಡರು. ಎನ್ಜೆಎಸಿ ಕಾನೂನನ್ನು ಜಾರಿ ಮಾಡಲು ಸರ್ಕಾರ ಹೊಸ ವಿಧೇಯಕ ರೂಪಿಸಲಿ ಎಂದು ಎಐಎಡಿ ಎಂಕೆ ಸದಸ್ಯ ಕೆ ಕಾಮರಾಜ್, ಟಿಡಿಪಿ ಯ ರವೀಂದ್ರ ಬಾಬು, ಬಿಜೆಪಿಯ ಪಿ ಬಿ ಚೌಧರಿ ಆಗ್ರಹಿಸಿದರು.